ಹಾಸ್ಯ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
ಹಾಸ್ಯ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ

ಶನಿವಾರ, ಸೆಪ್ಟೆಂಬರ್ 28, 2019

*ಸೆಕ್ಯುಲರ್ ರಾಷ್ಟ್ರಕ್ಕೆ ಸೆಕ್ಯುಲರ್ ಭಾಷೆ ಮಲೆಯಾಳಂ ಅನ್ನು ರಾಷ್ಟ್ರಭಾಷೆಯನ್ನಾಗಿ ಮಾಡಬೇಕಂತೆ. -"ಹಾಸ್ಯ ಬರಹ"*

*ಸೆಕ್ಯುಲರ್ ರಾಷ್ಟ್ರಕ್ಕೆ ಸೆಕ್ಯುಲರ್ ಭಾಷೆ ಮಲೆಯಾಳಂ ಅನ್ನು ರಾಷ್ಟ್ರಭಾಷೆಯನ್ನಾಗಿ ಮಾಡಬೇಕಂತೆ. -"ಹಾಸ್ಯ ಬರಹ"*



ಉತ್ತರಭಾರತದ ಒಂದು ಹೈವೆಯಲ್ಲಿ ಡ್ರೈವ್ ಮಾಡಿಕೊಂಡು ಹೋಗುತ್ತಿರುವಾಗ, ಸತತ ಡ್ರೈವ್ ಮಾಡಿ ತುಂಬ ಸುಸ್ತಾಗಿದ್ದಿದ್ದರಿಂದ, ಒಂದು ಡಾಬಾ  ಕಡೆ ಟೀ ಕುಡಿಯೋಣ ಅಂತ ನಿಲ್ಲಿಸಿ, ಟೀ ಕುಡಿಯಲು ಹೋದೆ. ಟೀ ಕುಡಿಯುತ್ತ ಹಾಗೆ ಸುತ್ತಲೂ ನೋಡುತ್ತಿರುವಾಗ, ಕ್ಯಾಷಿಯರ್ ಪಕ್ಕದಲ್ಲಿ ನೇತು ಹಾಕಿದ್ದ ಒಂದು ಫೋಟೋ ಗಮನ ಸೆಳೆಯಿತು.
ಟೀ ಕುಡಿದು ಹಣ ಕೊಡಲು ಅವನ ಹತ್ತಿರ ಹೋಗಿ ವಿಚಾರಿಸಿದೆ., ಏನ್ ಗುರು ಯಾವ ಊರು, ನಿನ್ನನ್ನ ನೋಡೀದರೆ ನಮ್ಮ ಕೇರಳ ಕಡೆ ಯವನ ತರಹ ಕಾಣ್ತೀಯಲ್ಲ ಅಂತ ಕೇಳಿದೆ.
ಹೌದು ಸಾರ್ ನಂದು ಕೇರಳ, ನಿಮ್ಮದು ಯಾವ ಕಡೆ,.
- ನನ್ನದು ಕರ್ನಾಟಕ, ಅದೇನು ಕೇರಳದಿಂದ ಇಷ್ಟು ದೂರ ಬಂದಿದ್ದೀಯಲ್ಲ ಹೇಗೆ ಎಂದೆ.
ಸಾರ್, ಬೆಂಗಳೂರಿನಲ್ಲಿ ಕೆಲ ವರ್ಷಗಳ ಕಾಲ ಕೆಲಸ ಮಾಡ್ತಾಯಿದ್ದೆ. ನಂತರ ತುಮಕೂರ್ ರಸ್ತೆಯಲ್ಲಿ ಒಂದು ಕಾಕಾ ಹೋಟೆಲ್ ಶುರು ಮಾಡಿದೆ. ಎರಡು ಮೂರು ವರ್ಷ ಚೆನ್ನಾಗಿ ನಡೀತಾಯಿತ್ತು.  ನಮ್ಮ ಪಕ್ಕದಲ್ಲಿ ಇನ್ನೂ ಒಂದು ದಾಬಾ ಶುರುವಾಯಿತು, ಅದರಿಂದ ನಮ್ಮ ವ್ಯಾಪಾರ ಸಹ ಸ್ವಲ್ಪ ಡಲ್ ಹೊಡೆಯಲಿಕ್ಕೆ ಶುರು ಮಾಡಿತು. ನಮ್ಮ ಹೋಟೆಲ್ ಗೆ  ಡೆಲ್ಲಿ ಕಡೆಯಿಂದ ಆಗಾಗ್ಗೆ ಒಬ್ಬ ಲಾರಿಯವನು ಬರ್ತಾಯಿದ್ದ, ಬಹಳಷ್ಟು ಸಾರಿ ಬಂದಿದ್ದರಿಂದ ಪರಿಚಯ ಆಗಿತ್ತು. ಅರೇ ಭಾಯಿ ನೀನು ನಮ್ಮ ಕಡೆ ಬಂದು ಅಲ್ಲಿ ಹೋಟೆಲ್ ಶುರು ಮಾಡು, ಈ ನಿನ್ನ ಅಡಿಗೆ ಟೇಸ್ಟಿಗೆ ಒಳ್ಳೆ ವ್ಯಾಪಾರ ಆಗುತ್ತೆ ಅಂತ ಯಾವಾಗಲು ಹೇಳ್ತಾಯಿದ್ದ. ಒಂದು ದಿನ ಅವನ ಲಾರಿಯಲ್ಲಿ ಸಾಮಾನು ಹಾಕಿಕೊಂಡು ಬಂದು ಇಲ್ಲಿ ಸೆಟ್ಲ್ ಆಗಿಬಿಟ್ಟೆ ಅಂತ ಹೇಳಿದ. ಸುತ್ತ ಮುತ್ತ ಸುಮಾರು ಜನ ಕೇರಳದವರು ಇದ್ದಾರೆ, ಆದ್ದರಿಂದ ಎಲ್ಲ ಚೆನ್ನಾಗಿ ನಡೀತಾಯಿದೆ.
- ಇದೇನು ಇಷ್ಟು ದೊಡ್ಡವರ ಜತೆ ಪೋಟೋ ತೆಗೆಸಿಕೊಡಿದೀಯಾ?
ಅವನು ಹೌದು ಸಾರ್,  ಅದೇನಾಯಿತು ಅಂದ್ರೆ, ಒಂದು ದಿನ ನಾಲ್ಕೈದು ದೊಡ್ಡ ದೊಡ್ಡ ಕಾರುಗಳು ಬಂದವು, ಅದರಲ್ಲಿದ್ದ ಗನ್ ಮ್ಯಾನ್ ಗಳು ಹೊರ ಬಂದು ಅದೇನೋ ಮಾತನಾಡಿಕೊಂಡು ಕಾರ್ ಸುತ್ತ ಮುತ್ತ ನಿಂತು ಕೊಂಡರು., ನಮ್ಮ ಹೋಟೇಲ್ ಗೂ ಸಹ ಕೆಲ ಜನ ಬಂದು ನಿಂತು ಕೊಂಡರು. ನಾವು ಏನಾಗ್ತಾಯಿದೆಯಪ್ಪಾ ಅಂತ ಭಯ ಬಿದ್ದಿವಿ. ಆಮೇಲೆ ಗೊತ್ತಾಗಿದ್ದು ಏನೆಂದರೆ, ರಾಹುಲ್ ಗಾಂಧಿಯವರು ಎಲ್ಲೋ ಹೊರಟಿದ್ದರಂತೆ, ಅವರಿಗೆ ಟೀ ಕುಡಿಬೇಕೆನಿಸಿತಂತೆ ಹೀಗಾಗಿ ನಮ್ಮ ಹೋಟೆಲ್ ನೋಡಿ ಗಾಡಿ ನಿಲ್ಲಿಸಿ ಟೀ ಕುಡಿದು ಹೋದರು. ಆ ಖುಷಿಗಾಗಿ ತೆಗೆದ ಫೋಟೋ ಇದು.
ಇನ್ನೊಂದು ವಿಷಯ ಗೊತ್ತಾ, ಈಗ ಅವರು ನಮ್ಮ ಕೇರಳದ ಎಂಪಿ ಗೊತ್ತಾ ಅಂದ.
- ಗೊತ್ತು ಕಣ್ರೀ, ಮುಂದೇನಾಯಿತು?
ಹಾಂ!! ಮೊನ್ನೆ ಬಂದಾಗ ಅವರಿಗೆ ಒಂದು ಪ್ರಪೋಸಲ್ ಕೊಟ್ಟಿದೀನಿ.
- ನನಗೆ ಆಶ್ಚರ್ಯ ಆಯಿತು, ಏನಾದರು ಮದುವೆ ಪ್ರಪೋಸಲ್ ಕೊಟ್ಟಿದ್ದಾನಾ ಅಂತ ಕೇಳೀದೆ. ಏನು ಮದುವೆ ಪ್ರಪೋಸಲ್ಲಾ?
"ಅಲ್ಲ ಭಾಯ್, ಸೆಕ್ಯುಲರ್ ಇಂಡಿಯಾಗೆ ಸೆಕ್ಯುಲರ್ ಭಾಷೆ ಯಾಗಿರೋ ಮಲೆಯಾಳಂ ಅನ್ನು ರಾಷ್ಟ್ರಭಾಷೆ ಮಾಡಿ ಅಂತ."
- ಅವನ ಮಾತು ಕೇಳಿ ನನಗೆ ತಲೆ ತಿರುಗಿ ನೆಲಕ್ಕೆ ಬೀಳೋದೊಂದೇ ಬಾಕಿ. ಸ್ವಲ್ಪ ಸಾವರಿಸಿಕೊಂಡು, ಯಾಕೆ ಸಿವಾ ಬೇರೆ ಏನ್ ಐಡಿಯಾ ಸಿಗಲಿಲ್ವೆ ನಿಂಗೆ?
- ಭಾಯ್, ಸ್ವಲ್ಪ ಯೋಚನೆ ಮಾಡಿ ನೋಡು. ನಾವು ಗಳು ಒಂಥರಾ ಸರ್ವಂತಾರಯಾಮಿ ಇದ್ದಂಗೆ. ನಿಮ್ಮ ಬೆಂಗಳೂರಿನಿಂದ ಡೆಲ್ಲಿ ವರೆಗೂ ಯಾವುದೇ ಸಿಟಿಗೆ ಹೋಗಿ, ಮಲೆಯಾಳಿಗಳು ಸಿಕ್ಕೇ ಸಿಗ್ತಾರೆ. ಮಲೆಯಾಳಿಗಳು ಇಲ್ಲದ ಸಿಟಿಗಳು, ಸ್ಟೇಟ್ ಗಳು, ದೇಶಗಳು ಇಲ್ಲ. ಈಗ ನೀವು ಯಾವುದೇ ಹಾಸ್ಪಿಟಲ್ ಗೆ ಹೋಗಿ, ಮಲೆಯಾಳಿ ನರ್ಸ್ ಅನ್ನು ಕಾಣ್ತಿರಿ ಅಲ್ವೆ. ಮಿಲಿಟರಿ ನಲ್ಲಿ ನಮ್ಮ ಕೇರಳದವರು ಎಷ್ಟೊಂದು ಜನ ಇದ್ದಾರೆ ನೋಡಿ.
ಗಲ್ಫ್ ರಾಷ್ಟ್ರಗಳಲ್ಲಿ, ಅಲ್ಲಿನ ಅರಬ್ಬರಿಗಿಂತ ಮಲೆಯಾಳಿಗಳು ಅಧಿಕರಾಗಿದ್ದಾರೆ ಗೊತ್ತಲ್ವ. ಗಲ್ಫ್ ರಾಷ್ಟ್ರಗಳಲ್ಲಿ, ನೀವು ಇಂಡಿಯಾದವರ ಅಂದ್ರೆ, ಕೇರಳದವರಾ ಅಂತ ಕೇಳ್ತಾರೆ.
ಒಂದು ಜೋಕ್ ಗೊತ್ತಲ್ಲ ನಿಂಗೆ. ಚಂದ್ರ ನ ಮೇಲೆ ನೀಲ್ ಆರ್ಮ್ ಸ್ಟ್ರಾಂಗ್ ಕಾಲು ಇಟ್ಟಾಗ, ಚಾಯ್, ಕಾಫೀ, ಟೀ ಅಂತ ಕೇಳಿ ಬಂತಂತೆ. ನೀಲ್ ಆರ್ಮ್ ಸ್ಟ್ರಾಂಗ್ ಗೆ ಯಾವನಪ್ಪ ಇವನು ನನಗಿಂತ ಮುಂಚೇನೆ ಇಲ್ಲಿ ಕಾಲಿಟ್ಟಿರೋನು? ಅಂತ ತಿರುಗಿ ನೋಡಿದರೆ ಹಿಂದೆ ಮಲೆಯಾಳಿ ಕಾಕ ಹೋಟೆಲ್........

ಅದೆಲ್ಲ ಸರಿ, ಈ ಸೆಕ್ಯುಲರ್ ಮದ್ಯೆ ಯಾಕೆ ಬಂತು?

- ನೋಡಿ ಭಾಯ್ ನಮ್ಮ ಸ್ಟೇಟ್ ಮಾತ್ರ ಸ್ಪೆಶಿಯಲ್, ನಿಮ್ಮ ಸ್ಟೇಟ್ ನಲ್ಲಿ ಮುಸ್ಲಿಮ್ಸ್ ಉರ್ದು ಮಾತಾಡ್ತಾರೆ. ಮಂಗಳೂರಿಗೆ ಹೋದರೆ ಬ್ಯಾರಿ ಮಾತಾಡ್ತಾರೆ. ಹಿಂದುಗಳು, ಕನ್ನಡ, ತುಳು ಕೊಂಕಣಿ ಮಾತಾಡ್ತೀರಿ. ಆದರೆ ನಮ್ಮ ಕೇರಳದ ಎಲ್ಲ ಧರ್ಮದವರೂ ಮಲೆಯಾಳಿಯನ್ನೆ ಮಾತಾಡ್ತೀವಿ, ಈಗ ಹೇಳಿ, ನಾವು ಸೆಕ್ಯುಲರ್ ತಾನೆ.
ಇಡೀ ಇಂಡಿಯಾದಲ್ಲಿ, ಬಿಜೆಪಿ ಸ್ಟ್ರಾಂಗ್ ಆಗಿದೆ.  ಆದರೆ ನಮ್ಮ ಕಡೆ ಯಾವಾಗಲು LDF ಅಥವ UDF ನಡುವೇ ಫೈಟ್. ಕೇರಳದಲ್ಲಿ ಮಾತ್ರ ಬಿಜೆಪಿ ಇನ್ನೂ ಬೆಳೆದಿಲ್ಲ. ಹೀಗಾಗಿ ನಾವು ಸೆಕ್ಯುಲರ್ ತಾನೆ.
 ಅದೂ ಅಲ್ಲದೆ, ಎಲ್ಲ ಧರ್ಮದವರೂ ಬೀಫ್ ತಿಂತೀವಿ. ಬೇರೆಯವರ ತರಹ ಭೇದ ಭಾವ ಮಾಡಲ್ಲ.  ಆದರೆ, ನೀವು?
ಹಿಂದಿನ ಸುಪ್ರೀಂ ಕೋರ್ಟ್ ನ್ಯಾಯಾದೀಶರಾಗಿದ್ದ ಮಾರ್ಕಂಡೇಯ ಕಾಟ್ಜು ಹೇಳಿದ್ರಲ್ಲ, ಮಲೆಯಾಳಿಗಳು ನಿಜವಾದ ಭಾರತೀಯರು ಅಂತ.
ಅಂತಹ ದೊಡ್ಡವರೇ ಹೇಳಿದ್ ಮೇಲೆ, ನಾವು ಸೆಕ್ಯುಲರ್ ಇಂಡಿಯಾದ ನಿಜವಾದ ಪ್ರಜೆಗಳು ಅಲ್ವೆ.

ಅಯ್ಯೋ, ಇದೇನ್ ತಲೆ ನೋವು. ಇವನೇನ್ ಎಲ್ಲಿಂದ ಎಲ್ಲಿಗೆ ಸಂಭಂದ ಕಲ್ಪಿಸ್ತಾನಲ್ಲ? ಅದೆಲ್ಲ ಸರಿ, ಮಲೆಯಾಳಂ ಅನ್ನೇ ರಾಷ್ಟ್ರ ಭಾಷೆ ಯಾಕೆ ಮಾಡಬೇಕು.
ಆಗಲೇ ಹೇಳಿದೆನಲ್ಲ ಸಾರ್, ಮುಸ್ಲಿಮರು ಕುರಾನ್ ಅನ್ನು ಮಲೆಯಾಳಂ ಅಲ್ಲಿ ಪಠಣ ಮಾಡ್ತೀವಿ, ಹಿಂದು ಗಳು ಮಲೆಯಾಳಂ ನಲ್ಲಿಯೇ ಪೂಜೆ ಮಾಡ್ತಾರೆ, ಅದೇ ರೀತಿ ಕ್ರಿಶ್ಚಿಯನ್ ರು ಮಲೆಯಾಳಂ ನಲ್ಲಿ ಮಲೆಯಾಳಂ ನಲ್ಲಿ ಪ್ರೇಯರ್ ಮಾಡ್ತಾರೆ... ಅದಕ್ಕೆ ಮಲೆಯಾಳಂ ಸೆಕ್ಯುಲರ್ ಭಾಷೆ ಅನ್ನೋದು. ಧರ್ಮ ಭೇದ ಇಲ್ಲ. ಇಂತಹ ಭಾಷೆಯನ್ನ ರಾಷ್ಟ್ರಭಾಷೆ ಮಾಡೋದ್ರಲ್ಲಿ ತಪ್ಪೇನಿದೆ?
ಎಲ್ಲ ಕಡೆ ಮಲೆಯಾಳಿಗಳು ಇರೋದ್ರಿಂದ, ನೀವೆಲ್ಲ ಮಲೆಯಾಳಂ ಮಾತಾಡಿದ್ರೆ ವ್ಯವಹಾರ ಮಾಡೋಕೆ ಸಲೀಸಾಗುತ್ತೆ. ಇದರಿಂದ ನಿಮಗೆ ಅನುಕೂಲ ಅಲ್ವೆ. ಮಲೆಯಾಳಂ ಗೊತ್ತಿದ್ದ್ರೆ ಮಲೆಯಾಳಿಗಳು ಮಲೆಯಾಳಂ  ಅಲ್ಲಿ ಬೈಯೋಕೆ ಆಗಲ್ಲ. ಸುಂದರವಾಗಿರುವ ಮಲೆಯಾಳಿ ಕುಟ್ಟಿಗಳನ್ನು ನಿಮ್ಮ ಹುಡುಗರು ಮದುವೆ ಯಾಗಬಹುದು. ಹೀಗೆ, ರಾಜ್ಯಗಳ ಭಾಂಧವ್ಯ ಬೆಸೆಯುತ್ತ ಹೋಗುತ್ತೆ. ಒಂದು ರಾಷ್ಟ್ರ, ಒಂದು ಭಾಷೆ ಕಲ್ಪನೆ ಅಧ್ಭುತ ವಾಗಿರುತ್ತೆ.

ಇದೆಲ್ಲ ಸರಿ, ಅದಕ್ಕೆ ದೊಡ್ಡವರು ಏನ್ ಹೇಳಿದರು.

- ಅವರಿಗೆ ನನ್ನ ವಾದ ಕೇಳಿ ಖುಷಿ ಯಾಗೋಯ್ತು. ಮಲೆಯಾಳಿಗಳು ಈಗಾಗಲೆ ಎಲ್ಲ ಸ್ಟೇಟ್ ಗಳನ್ನು ಹೈವೆ ರೋಡ್, ರೈಲ್ವೇ ನೆಟ್ ವರ್ಕ್ ತರಹ ಬೆಸೆದು ಬಿಟ್ಟಿದ್ದೀರಿ. ಎಲ್ಲಿ ಹೋದರು ಮಲೆಯಾಳಿಗಳು. ತುಂಬಾ ಗ್ರೇಟ್ ಇದ್ದೀರಿ ನೀವು ಅಂದರು. ಅದಕ್ಕೆ ಸಾರ್ ಎಲ್ಲ ಸ್ಟೇಟ್ ಗಳಲ್ಲಿ ಮಲಯಾಳಂ ಕಲಿಸಿ ಸರ್ರೇ,  ಎಂದು ಕೇಳಿದ್ವಿ.
ಆಯ್ತು ನೋಡೋಣ ಅಂತ ಹೇಳಿ ಹೋದರು.

ನಮ್ಮ ರಾಜ್ಯದಲ್ಲಿ ಈಗಾಗಲೇ ಹಿಂದಿ ಹೇರಿಕೆ ಬೇಡ ಅಂತ ಹೋರಾಟ ಮಾಡ್ತಾ ಯಿದ್ದಾರೆ, ಅದರಲ್ಲಿ ಇದೇನಪ್ಪ ಹೊಸ ತಲೆನೋವು. ನಮ್ಮ ಜನರಿಗೆ ಈಗಲೇ ಅರಿವು ಮೂಡಿಸಬೇಕು. ನಾಳೆ ಟೌನ್ ಹಾಲ್ ಅಲ್ಲಿ ಹೋರಾಟ ಮಾಡಬೇಕು. ಮಲೆಯಾಳಂ ಹೇರಿಕೆ ಬೇಡ ಅಂತ.
ಆದರೆ ಸೆಕ್ಯುಲರ್ ಭಾಷೆ ಕಲಿಯೋದೇನು ತಪ್ಪು ಅಂತ ನಮ್ಮ ಜನ ಹೋರಾಟ ಮಾಡ್ತಾರ ಅಂತ ನನಗೆ ಯೋಚನೆ ಶುರು ಆಯಿತು, ಒಂದೊಂದ್ ಸಾರಿ ಸ್ಪಷ್ಟ ಕನ್ನಡ ಮಾತನಾಡೋಕೆ ನಾಲಿಗೆ ಹೊರಳಲ್ಲ, ಅಂತದ್ರಲ್ಲಿ, ಮಲೆಯಾಳಂ ಮಾತನಾಡಬೇಕೆನಪ್ಪ, ಎಂದ ದೈವಮೇ..........
ನ್ಯಾನ್ ಮಲೆಯಾಳಂ ಕಲಿಯಲ್ಲ ಚೇಟಾ, ಇದ್ ಎಂದಾಣೋ ನಂಗೆ ಇದೋಡ ಸಾವಸಂ ವೇಂಡ.......
ರೀ ರೀ ಅಂತ ಕರೆದಂಗಾಯ್ತು, ಅದ್ರೆ ನಂಗೆ ಚೇಟಾ, ಚೇಟಾ ಅಂತ ........
ರೀ ಆಫೀಸ್ ಇಲ್ವೇನ್ರಿ, ಅಂದ್ರೆ,, ಆಫೀಸ್ ಇಲ್ಲಿಯೋ....... ಅಂತ ಕೇಳಿಸಿದ ಹಾಗಿತ್ತು.....
ಎದ್ದು ಕಣ್ಣು ಬಿಟ್ಟು ನೋಡಿದ್ರೆ, ಮನೆಯಲ್ಲಿದ್ದೀನಿ.
ಅಬ್ಬಾ,,, ಇಷ್ಟೊತ್ತು ನೋಡಿದ್ದು ಕನಸೋ.....   ಬದುಕಿದೆ ಬಡಜೀವ, ಮಲೆಯಾಳಂ ಕಲಿಯೋದು ತಪ್ಪಿತು....ಸದ್ಯ ಕನಸಾಗಿದ್ದು ಒಳ್ಳೇದಾಯ್ತು ಅಂತ ದಡಬಡಸಿ ಎದ್ದೆ.

ಬರಹ: ಪಿ.ಎಸ್.ರಂಗನಾಥ.

ಶನಿವಾರ, ಡಿಸೆಂಬರ್ 15, 2018

ಮೇಲ್ ಅನ್ನೋ ರಾಮಾಯಣ

"*ಮೇಲ್ ಅನ್ನೋ ರಾಮಾಯಣ*"
ಚುಟುಕು ಹಾಸ್ಯ: ಪಿ.ಎಸ್ .ರಂಗನಾಥ.

ಇತ್ತೀಚೆಗೆ ಕನ್ನಡವನ್ನು ಶಾರ್ಟ್ ಕಟ್ ಆಗಿ ಉಪಯೋಗಿಸುವುದನ್ನು ನಾವೆಲ್ಲ ಕಾಣುತಿದ್ದೇವೆ. ಅದೂ ಅಲ್ಲದೆ, ಬೆಂಗಳೂರಿಗೆ, ಬೇರೆ ಬೇರೆ ರಾಜ್ಯಗಳಿಂದ ಜನ ಬಂದ ಮೇಲೆ ಅಂತೂ, ಕನ್ನಡ ತುಂಬಾ ಬದಲಾಗಿದೆ.

ನಾವೆಲ್ಲ ಸಾಮಾನ್ಯವಾಗಿ, ಮೇಲ್ ಹೋಗಿ, ಮೇಲ್ ಕಳಿಸಿ, ಮೇಲ್ ಮಾಡಿ ಅಂತ ದಿನಾಲೂ ಕೇಳ್ತಿರ್ತೀವಿ.
ಉದಾ:- ಮೇಲ್ ಹೋಗಿ ಅಂದರೆ,
ಏನಂತ ತಿಳ್ಕೊಳ್ಳಬೇಕು?
ಅವನು ಯಾವ ಉದ್ದೇಶದಿಂದ ಹೇಳಿದ ಅಂತ, ಸ್ವಲ್ಪ ಗಮನ ಇಟ್ಟು ಅವನನ್ನ ಗುರಾಯಿಸಿ ಕ್ಲಾರಿಫಿಕೇಶನ್ ಗಾಗಿ ಕಾಯಬೇಕು.,
ಮಹಡಿ ಹತ್ತಿ ಅಂತನಾ?
ಅಲ್ಲ, Male (ಗಂಡಸರು) ಹೋಗಿ ಅಂತಾನ?
ಅದೆಲ್ಲ ಬಿಟ್ಟು,......
ಮ್ಯಾಗಡೆ, ಮ್ಯಾಕೆ ಹೋಗಪ್ಪ (ಹೊಗೆ ಹಾಕಿಸಿಕೊಳ್ಳೋದು) ಅಂತಾನ?

ಕೆಲವೊಂದು ಸಾರಿ, ಮನೆಗೆ ಸೇಲ್ಸ್ ಮ್ಯಾನ್ ಬಂದಾಗ, ನಮ್ಮನ್ನ ನೋಡಿ, "ಮೇಲ್ ಯಾರು ಇಲ್ವಾ ಸಾರ್" ಎಂದರೆ, ನಖಶಿಕಾಂತ ಉರ್ದೋಹೋಗುತ್ತೆ. ಮೀಸೆ ದಾಡಿ ಬಿಟ್ಕೊಂಡು ಬರ್ಮುಡ ಹಾಕಿಕೊಂಡು ಸ್ಟೈಲಾಗಿ ನಿಂತ್ರೆ,,, ಕಳ್ ನನ್ ಮಗ ಮೇಲ್ ಯಾರು ಇಲ್ವ ಅಂತ ಕೇಳ್ತಾನಲ್ಲ,.....
ಹೆಂಡತಿ ಬಂದು, ಇಲ್ಲ ಖಾಲಿ ಮಾಡ್ಕೊಂಡು ಹೋಗಿದ್ದಾರೆ ಅಂದರೆ, ಓಹ್ ಆ ಆರ್ಥದಲ್ಲಿ ಕೇಳಿದ್ನಾ ಅಂತ ಸಮಾಧಾನ ಮಾಡ್ಕೊಳ್ಳಬೇಕಾಗುತ್ತೆ.....

ಇನ್ನು ಮೇಲ್ ಕಳಿಸಿ ಅಂದರೆ,
ಯಾರನ್ನಾದರು ಮೇಲಕ್ಕೆ ಕಳುಹಿಸೋದು ಅಂತಾನಾ
ಅಲ್ಲ, ಈ ಮೇಲ್ ಕಳುಹಿಸೋದು ಅಂತಾನ?
ಏನಂತ ತಿಳ್ಕೋಳ್ಳೋದು?

ಆಸ್ಪತ್ರೆ ಹೋಗಿರ್ತೀವಿ,
ಅಲ್ಲಿ ಡಾಕ್ಟರ್ ಅಥವ ನರ್ಸ್ ಯಾರೋ ಒಬ್ಬರು,
 "ಅವರನ್ನ ಮೇಲ್ ಕಳಿಸಿ" ಅಂದರೆ,
ಹೆಂಗಾಗಿರಬೇಡ....
ಹುಷಾರಿಲ್ಲ, ತೋರಿಸಿಕೊಂಡು ಹೋಗೋಣ ಅಂತ ಬಂದರೆ.
ನಾವು ಕಳುಹಿಸುವವರನ್ನ ಗುರಾಯಿಸಿ ನೋಡಿ,
ನನ್ನ ಮೇಲೆ ಕಳುಹಿಸೋಕೆ ಏನಾದರು ಸ್ಕೆಚ್ ಹಾಕಿದ್ದಾನ ಅಂತ ಯೋಚಿಸಿ......
ನೀವ್ಯಾರಿ ನಮ್ಮನ್ನ ಮೇಲೆ ಕಳುಹಿಸೋಕೆ, ಅಂತ ಗುರಾಯಿಸಿ ಲುಕ್ ಕೊಟ್ಟು,
ನನ್ಮಗನೆ, ನನ್ನನ್ನ ಅಲ್ಲ ಕಣೋ ಕಳುಹಿಸೋದು,
ನಿನ್ನನ್ನು ಎರಡು ತದಕಿ ಕಳುಹಿಸಬೇಕು ಅನ್ನೋ ಕೋಪ ಬರುತ್ತೆ ಅಲ್ಲವೇ.
ಸಾರ್.......ಬ್ಲಡ್ ಚೆಕ್ ಅಪ್ ಗೆ ಮೇಲೆ ಹೋಗಿ........
ಓಹ್ ಹಂಗೇ.......................

ಹೆಂಡತಿ ಜತೆಗಿದ್ದಾಗ,  ಮೇಲ್ ಮಾತ್ರ ಹೋಗಿ ಅಂದರೆ,
ಮೇಲೆ ಹೋಗಿ ಅಂತ ಅರ್ಥಾನೋ, ಅಥವ Male (ಗಂಡಸರು) ಮಾತ್ರ ಹೋಗಿ ಅಂತಾನೋ?
ಮೇಲೆ ಮಾತ್ರ ಹೋಗಿ, ಬೇರೆಲ್ಲೂ ಹೋಗಬೇಡೀ ಅಂತಾನೋ, ಅಂತ ಯೋಚಿಸಬೇಕಾಗುತ್ತೆ..
ಆಗ ಹೆಂಡತಿ, ನೋಡ್ರಿ ನಿಮ್ಮನ್ನ ಕರೀತಾರೆ ಅಂದ್ರೆ.....
ನಾವು ಮನಸ್ಸಿನಲ್ಲಿ,  ಸದ್ಯ ಈಗಲಾದರು ನಮ್ಮ ಐಡೆಂಟಿಟಿ ಸಿಗ್ತು ಖುಷಿ ಪಟ್ಕೊಂಡು, ಸದ್ಯ ಅಂಗಡಿಯವನು ಗಂಡಸು ಹೆಂಗಸು ಗುರ್ತು ಹಿಡಿದುಬಿಟ್ಟ....
ಆಗ ನಾವೇನಾದ್ರು, ಸರಿ ಇಲ್ಲೇ ಇರು ನಾನು ಹೋಗಿ ಬರ್ತೀನಿ ಅಂತ ಹೊರಟರೆ,....
ಅಂಗಡಿಯವನು,
ಸಾರ್, ನಾನು ಹೇಳಿದ್ದು, ಮೇಲೆ ಹೋಗಿ ಚೆಕ್ ಮಾಡಿ ಅಂತ...
ಅಯ್ಯೊ ಮುಂಡೇದೆ, ಅದನ್ನ ಸರಿಯಾಗಿ ಹೇಳೋಕಾಗಲ್ವೆ?

ಉತ್ತರಭಾರತೀಯನೊಬ್ಬ "ಮೇಲ್ ಏಳಿ" ಅಂದರೆ,
ಮೇಲೆ ಎದ್ದೇಳಿ ಅಂತಾನೋ, ಮೇಲ್(ಗಂಡಸು) ಮಾತ್ರ ಹೇಳಿ ಅಥವಾ ಮೇಲೆ ಹೋಗಿ ಹೇಳಿ ಅಂತಾನೋ ಕ್ಲಾರಿಫಿಕೇಶನ್ ಕೇಳ್ಬೇಕಾಗುತ್ತೆ.

*ಮೇಲ್ ಮಾಡಿ.......*
ಗುಂಡ ಮತ್ತು ರೀಟಾ ಆಫೀಸಿ ನಲ್ಲಿ ಗುಸು ಗುಸು ಮಾತನಾಡುತ್ತಿರುವಾಗ, 
ಸಡನ್ನಾಗಿ ಅವರ ಬಾಸ್ ಬಂದು,
ಮೇಲ್ ಮಾಡಿ ಅಂತ ಹೇಳಿದ್ನಲ್ಲಾ.....
ಗುಂಡ ಮನಸ್ಸಿನೊಳಗೆ, "ಸಾರ್, ಅದಕ್ಕೆ ಅವಕಾಶನೇ ಸಿಗ್ತಿಲ್ಲಾ” ಅಂದರೆ
ಜಗ್ಗೇಶ್, ಕಾಶೀನಾಥ ಸಿನಿಮಾಗಳಲ್ಲಿದ್ದಂತೆ, ಛೀ ಏನು ಪೋಲಿ ಮಾತುಗಳಪ್ಪ,  ಅಂತ ಕಿಸಿತೀವಿ.

ಗುಂಡ, ಮೇಲೆ ಇರೋ ಫೈಲ್ ಕಪಾಟು ಓಪೆನ್ ಮಾಡಿ, ಫೈಲ್ ತೆಗೆದು ಕೊಳ್ಳೋಕೆ ಹೋದರೆ,
ರೀಟಾ, ರೀ........ ಗುಂಡಣ್ಣ, ಎಷ್ಟು ಸಾರಿ ಹೇಳಿದ್ದೀನಿ..
*ಮೇಲ್ ಮಾತ್ರ ಕೈ ಹಾಕಬೇಡಿ* ಅಂತ,
ಸುತ್ತ ಮುತ್ತ ಇದ್ದೋರೆಲ್ಲ, ಗುಂಡಣ್ಣ ಯಾವುದಕ್ಕೆ ಕೈ ಹಾಕಿದ ಅಂತ ಪಿಳಿ ಪಿಳಿ ನೋಡ್ತಿದ್ರೆ,
ಗುಂಡಣ್ಣ,..... ಎಲಾ ಬಡ್ಡಿ ಮಕ್ಕಳ, ಏನ್ ರಸಿಕರು ಕಣ್ರೋ ನೀವೆಲ್ಲ, ಹೆಂಗೆ ಕಣ್ಣು ಮಿಟುಕಿಸದೆ ನೋಡ್ತೀರಾ? ಅಂತ ಮನಸ್ಸಿನೊಳಗೆ ಅಂದು ಕೊಳ್ತಾನೆ.

ಇನ್ನೂ.... ಮೇಲ್ ಮೇಲೆ ಮಾಡೀ ಅಂದರೆ......
...
...
...
...
ಏನೆಲ್ಲ ಅವಾಂತರ ಸೃಷ್ಟಿ ಯಾಗಬಹುದು ಅಂತ
ನೀವೇ ಊಹಿಸಿ ಕೊಳ್ಳಿ.......
ಸ್ವಲ್ಪ ನಗಿ ... ಹಾಗೆ, ಇದನ್ನು ಫಾರ್ ವರ್ಡ್ ಮಾಡಿ ಬೇರೆಯವರನ್ನೂ ನಗಿಸಿ....
ಧನ್ಯವಾದಗಳು.
#kannadajokes  #ps.ranganatha 

ಭಾನುವಾರ, ಮೇ 6, 2018

ಎಂತ ಮಾಯಾವಿ ನೀನು

ಅಮವಾಸ್ಯೆ ರಾತ್ರಿಯಲ್ಲಿ
ಚಂದಿರನ ಕಾಣಿಸುವೆ ನೀನು

ತಂಪಾದ ರಾತ್ರಿಯಲ್ಲಿ
ಬೆಚ್ಚಗಾಗಿಸುವೆ ನೀನು

ಮೈ ಮನ ಬಳಲಿ ಬೆಂಡಾದಾಗ
ದಣಿವರಿಸುವೆ ನೀನು

ಕಷ್ಟ ದುಖಃ ಬಂದಾಗ,
ಎಲ್ಲವನ್ನು ಮರೆಸುವೆ ನೀನು

"ಎಣ್ಣೇ" ಎಂತ ಮಾಯಾವಿ ನೀನು

ಮೋದಿ: ಮದ್ಯಪಾನ ನಿಷೇದ

ಚುನಾವಣೆ ಪ್ರಚಾರಕ್ಕಾಗಿ ಕರ್ನಾಟಕ  ಮೋದಿ ಬಂದಾಗ, ಗುಂಡ ಮೋದಿಯವರನ್ನು ಭೇಟಿ ಮಾಡೋಕೆ ಹೋಗಿದ್ದ.  ಅಷ್ಟರಲ್ಲಿ, ಸೆಕ್ಯುರಿಟಿಯವರು ಗುಂಡನನ್ನ ತಡೆದರು. ನಾನು ಮೋದಿಯವರನ್ನು ಮೀಟ್ ಮಾಡಬೇಕಲೆ ಬೇಕು ಅಂದ. ಅಂಗೆಲ್ಲ ಆಗಲ್ಲ... ಪರ್ಮಿಶನ್ ಬೇಕು....
ಗುಂಡ ದರಣಿ ಕೂತ್ಕೊಂಡ, ವಿಷಯವನ್ನ ಮೋದಿಗೆ ಹೋಗಿ ಹೇಳಿದರು. ನಂತರ ಬೇಟಿಯ ವ್ಯವಸ್ಥೆಯಾಯಿತು.
ಮೋದಿಗೆ ಪ್ರಶ್ನೆ ಕೇಳಿದ, ನೀವು ನೋಟ್ ಬ್ಯಾನ್ ಮಾಡಿ ನನ್ನ ಲಕ್ಷಾಂತರ ದುಡ್ಡು ಲಾಸ್ ಮಾಡಿಬಿಟ್ಟಿರಿ, ಅದು ಬೇರೆ ಹದಿನೈದು ಲಕ್ಷ ಕೊಡ್ತಿನಿ ಅಂತ ಹೇಳಿದ್ದಿರಿ. ಅದನ್ನೂ ಹಾಕಲಿಲ್ಲ. ನಿಮ್ಮಿಂದ ನನಗೆ ತುಂಬಾ ನಷ್ಟವಾಗಿದೆ ಎಂದು ಹೇಳಿದ.....
ಮೋದಿಯವರು, ಗುಂಡನನ್ನ ಮೇಲಿಂದ ಕೆಳಗಿನವರೆಗೆ ಒಮ್ಮೆ ನೋಡಿ, ಈ ಬಾರಿ ಮತ್ತೊಂದು ಬ್ಯಾನ್ ಗೆ ದೊಡ್ಡ ಪ್ಲಾನ್ ನಡೀತಾ ಯಿದೆ.....
ಗುಂಡ: ಓಹ್ ಈ ಸಾರಿ ೨೦೦೦ ರೂಪಾಯಿ ಡಮಾರಾ...
ಮೋದಿ: ಅಲ್ಲ....
ಗುಂಡ:  ಓಹ್ ಬೇನಾಮಿ ಆಸ್ತಿ ನಾ......
ಮೋದಿ: ಅಲ್ಲ....
ಗುಂಡ: ಮತ್ತೆ......
ಮೋದಿ:  ಮದ್ಯಪಾನ ನಿಷೇದ....🍺✖
......
......
......
......

ದುಖಃ ತಡಿಲಾರದೆ......
ದೊರೆ, ಭಗವಂತ, ದೇವರೆ, ಮೋದಿ ಸಾಬ್ ನಿನಗೆ ಕೈ ಮುಗಿತೀನಿ🙏, ಬೇಕಿದ್ರೆ, ಸಿದ್ದರಾಮಯ್ಯ, ದೇವೆಗೌಡ, ಕುಮಾರಸ್ವಾಮಿ, ಡಿಕೆಶಿವಕುಮಾರ್ ಅವರೆಲ್ಲರ ಓಟ್ ಹಾಕಿಸಿಬಿಡ್ತಿನಿ, ದಯವಿಟ್ಟು 🍺🥂ಎಣ್ಣೆಗೆ ಮಾತ್ರ ಕೈ ಹಾಕಬೇಡಪ್ಪ. ಗೋಳೋ ಅಂತ ಕಣ್ಣೀರಿಟ್ಟ........😭😭😭

ಅಂದು ಅಮ್ಮ ನನ್ನ ಹೆಂಡತಿಯ ಕೈ ಹಿಡಿದು,

ಅಂದು ಅಮ್ಮ ನನ್ನ ಹೆಂಡತಿಯ ಕೈ ಹಿಡಿದು,
ಇವನನ್ನ ಮೂವತ್ತು ವರ್ಷ ಸಾಕಿ ಮುತ್ತಿನಂತೆ ನೋಡಿಕೊಂಡಿದ್ದೀನಿ. ಈಗ ಇನ್ಮುಂದೆ ಚೆನ್ನಾಗಿ ನೋಡಿಕೊಳ್ಳೊದು ನಿನ್ನ ಜವಬ್ದಾರಿ ಎಂದು ಹೇಳಿದ್ದಳು

ಇಂದು ನನ್ನ ಹೆಂಡತಿ ನನ್ನ ಸೊಸೆ ಕೈ ಹಿಡಿದು, ನೋಡು ನಿಮ್ಮ ಮಾವನನ್ನ ಮೂವತ್ತು ವರ್ಷ ಸಾಕಿದ್ದೀನಿ, ಈಗ ಇನ್ಮುಂದೆ ಅವರ ಕೊನೆ ಉಸಿರಿರುವವರಗೂ ಚೆನ್ನಾಗಿ ನೋಡಿಕೊಳ್ಳೊದು ನಿನ್ನ ಜವಬ್ದಾರಿ ಎಂದಳು.

ನನ್ನ ಕಣ್ತುಂಬಿ ಬಂತು......
ಮಗಳೇ ಊಟಕ್ಕೆ ಮುಂಚೆ, ಮರಿಯದೆ
 ಒಂದು 90, ನೆಂಚಿಕೊಳ್ಳೋಕೆ ಚಿಪ್ಸ್ ಅಥವಾ ಉಪ್ಪಿನಕಾಯಿ ಕೊಡೋದನ್ನ ಮರಿಬೇಡಮ್ಮ 🙏

ಗುರುವಾರ, ಸೆಪ್ಟೆಂಬರ್ 2, 2010

ಒಂದು ಕೆಲಸ ಮಾಡಲು ಹೋಗಿ ಇನ್ನೊಂದು ಮಾಡಿದರು

ಅಂದು ಬಾನುವಾರ ರಜಾದಿನವಾದ್ದರಿಂದ ಗುಂಡ ಮನೆಯಲ್ಲಿ ಸುಮ್ಮನೆ ಕುಳಿತಿದ್ದ. ಬೇಜಾರು ಆಗುತ್ತಿದೆ ಏನಾದರು ಕೆಲಸ ಮಾಡಿಕೊಡುತ್ತೇನೆ ಎಂದು ಹೆಂಡತಿ ಗುಂಡಿ ಯನ್ನು ಕೇಳಿದ. ಆದರೆ ಗುಂಡಿಗೆ ಇವರು ಮಾಡುವ ಅವಾಂತರ ಗಳು ಗೊತ್ತಿದ್ದರಿಂದ, ಒಂದು ಕೆಲಸ ಮಾಡಲು ಹೋಗಿ ಇನ್ನೊಂದು ಮಾಡ್ತೀರ ಎರಡೆರಡು ಕೆಲಸಗಳನ್ನು ಕೊಡುತ್ತೀರ, ಏನು ಬೇಡ ಸುಮ್ಮನೆ ಇದ್ದರೆ ಸಾಕು ಎಂದಳು. ಆದರೆ ಗುಂಡ ಸುಮ್ಮನಿರಲಾರದಾದ. "ನೋಡೆ ಗುಂಡಿ ಮನೆ ಮೇಲೆ ಸಿಂಟೆಕ್ಸ್ ಟ್ಯಾಂಕ್ ತೊಳೆದು ವರ್ಷಾನುಗಟ್ಟಲೆ ಆಗಿ ಹೋಗಿದೆ, ಆ ಕೆಲಸನಾದ್ರು ನಾನು ಮಾಡ್ತಿನಿ ಅದಕ್ಕೂ ಬೇಡ ಅನ್ನಬೇಡ" ಎಂದು ಮಹಡಿಯ ಮೇಲೆ ಹೊದ. ಹೌದಲ್ವ ತುಂಬಾ ದಿನ ಆಯಿತು ಕ್ಲೀನ್ ಮಾಡಿ, ಹೋಗಲಿ ಬಿಡು ಅಂತ ಒಪ್ಪಿಗೆ ಕೊಟ್ಟಳು. ಇವರ ಸಂಭಾಷಣೆ ಕೇಳಿಸಿಕೊಂಡಿದ್ದ ಮಗ ಚಿಕ್ಕ್ಗುಂಡ, ನಾನು ಸಹ ಬರ್ತಿನಿ ಎಂದು ಜತೆಯಲ್ಲಿ ಹೊರಟ. ಟ್ಯಾಂಕಿನ ಒಳಗಡೆ ಇಳಿಯೋಣ ವೆಂದು ಪ್ರಯತ್ನಿಸಿದ ಅದರೆ ಅದರ ಬಾಯಿ ಚಿಕ್ಕದಿದ್ದರಿಂದ ಒಳಗಡೆ ಇಳಿಯಲಿಕ್ಕಾಗಲಿಲ್ಲ. ಕೊನೆಗೆ ಯೋಚಿಸಿ ಮಗನಿಗೆ ಇಳಿಯಲು ಹೇಳಿ, ತೊಳೆಯಲು ಸೂಚನೆಗಳನ್ನು ಕೊಟ್ಟರೆ ಕೆಲಸ ಸಲೀಸಾಗಿ ಮಾಡಬಹುದು ಎಂದು ಭಾವಿಸಿ ಮಗನನ್ನು ಅರ್ಧ ತುಂಬಿದ್ದ ಟ್ಯಾಂಕಿನಲ್ಲಿ ಮಗನನ್ನು ಇಳಿಸಿದ, ಎಚ್ಚರಿಕೆಯನ್ನು ಕೊಡುತ್ತ "ಮಗನೇ ಒಂದು ಕೆಲಸ ಮಾಡಲು ಹೋಗಿ ಇನ್ನೊಂದು ಮಾಡಿ. ಎರಡೆರಡು ಕೆಲಸಗಳನ್ನು ಕೊಡಬೇಡ, ಇಲ್ಲದೆ ಇದ್ದರೆ ನಿಮ್ಮ ಅಮ್ಮ ನಿನಗೆ ಸೇರಿಸಿ ನನಗೂ ಬಾರಿಸುತ್ತಾರೆ"ಟ್ಯಾಂಕಿನಲ್ಲಿರುವ ನೀರು ಬಿಸಿಲಿಗೆ ಕಾದಿದ್ದರಿಂದ ಒಳಗಡೆ ಬೆಚ್ಚಗೆಇತ್ತು,  ಚಿಕ್ಕ್ಗುಂಡ ನೀರು ಬೆಚ್ಚಗಿದೆ ಎಂದು ಅದರಲ್ಲಿ ಆಟವಾಡೊದಿಕ್ಕೆ ಶುರು ಮಾಡಿದ. ಅಷ್ಟರಲ್ಲಿ ಗುಂಡಿ ಬಂದು, ಒಂದೆರಡು ಬಿಂದಿಗೆ ನೀರು ತುಂಬಿಸಿಕೊಂಡು ಬಿಡ್ತೀನಿ, ಎನಾದರು ತೊಳೆಯೊದಿಕ್ಕೆ ಬೇಕಾಗಬಹುದು, ಆಮೇಲೆ ಬೇಕಾದರೆ ನೀವು ತೊಳೆದುಕೊಳ್ಳಿ, ಎಂದು ದಡಬಡನೆ ಹೋದಳು. ನೀರು ಕಲಕಿದರೆ ಗಲೀಜಾಗಬಹುದು ಎಂದು ಕೊಂಡು ಗುಂಡ ಮಗನಿಗೆ ಸ್ವಲ್ಪ ಹೊತ್ತು ಸುಮ್ಮನೆ ಕೂತಿರಲು ಹೇಳಿದ. ಒಂದೈದು ನಿಮಿಷ ಹಾಗೆ ನೀರಿನಲ್ಲಿ ಕುಳಿತಿದ್ದರಿಂದ, ಚಿಕ್ಗುಂಡನ ಮೈ ನೊಚ್ಚಗಾಗುತಿತ್ತು. ಆದರೆ ಮೆಲ್ಲಗೆ ಅವನಲ್ಲಿ ಅರ್ಜೆಂಟಾಗಿ ಉಚ್ಚೆ ಹುಯ್ಯಬೇಕು ಅನ್ನಿಸಿತು. ಸ್ವಲ್ಪ ಹೊತ್ತಿನ ನಂತರ ಹೊರಗಡೆ ಹೋಗಿ ಮಾಡಿದರಾಯಿತು ಎಂದು ಕೊಂಡು ಸುಮ್ಮನಾಗುವಷ್ಟರಲ್ಲಿ, ಲೇ ಚಿಕ್ಕ್ಗುಂಡ ಟ್ಯಾಂಕ್ ನೀರಿನಲ್ಲಿ ಒಂದು ಮಾಡೊಕೆ ಹೋಗಿ ಇನ್ನೊಂದು ಮಾಡಿದರೆ ಒದೆ ಬಿಳುತ್ತೆ ನೋಡು" ಎಂದನು. ಚಿಕ್ಕ್ಗುಂಡ ಅದನ್ನು ತಪ್ಪಾಗಿ ಅರ್ಥೈಸಿಕೊಂಡು ಆಯಿತು ಪಪ್ಪ, ಉಚ್ಚೆ ಮಾತ್ರ ಮಾಡ್ತೀನಿ ಕಕ್ಕ ಮಾಡಲ್ಲ, ಎಂದು ತನ್ನ ಪಾಡಿಗೆ ಟ್ಯಾಂಕಿನಲ್ಲಿ ಮೂತ್ರ ವಿಸರ್ಜನೆ ಮಾಡಿದ. ಮಾಡಿದ ಮೇಲೆ, ಆಯಿತು ಪಪ್ಪ ಎಂದನು. ಏನೊ ಆಯಿತು ಎಂದರೆ, ಅದೇ ನೀವು ಹೇಳಿದರಲ್ಲ "ಒಂದು ಮಾತ್ರ ಮಾಡು ಎರಡು ಮಾಡಬೇಡ ಅಂದ್ರಲ್ಲ, ಅದಕ್ಕೆ ಉಚ್ಚೆ ಹುಯಿದೆ". ಅಯ್ಯೊ ಕರ್ಮ ಇವತ್ತು ನಮಗೆ ಗ್ರಹಚಾರ ಕಾದಿದೆ ಅಂದುಕೊಂಡು ದಡಬಡಾಯಿಸಿ ಅಡಿಗೆ ಮನೆಕಡೆ ಓಡಿದ. ಆದರೆ ಅಲ್ಲಿ ಗುಂಡಿ ಸಿಂಕ್ ನಲ್ಲಿ ಬಿಂದಿಗೆ ತುಂಬಿಸಿಕೊಂಡು ಕೈಯಲ್ಲಿ ಹಿಡಿದಿದ್ದಳು. "ನಿನ್ನ ಮಗ ಟ್ಯಾಂಕಿನಲ್ಲಿ ಉಚ್ಚೆ ಹುಯಿದು ಬಿಟ್ಟಿದ್ದಾನೆ, ನೀರೆಲ್ಲ ಗಲೀಜಾಗಿದೆ ನೀರು ತುಂಬಿಸುಬೇಡ ನಿಲ್ಲಿಸು ಎನ್ನಿಸುವಷ್ಟರಲ್ಲಿ, ಕೈಯಲ್ಲಿ ಹಿಡಿದಿದ್ದ ಬಿಂದಿಗೆ ಕೆಳಗೆ ಬಿದ್ದು, ನೀರೆಲ್ಲ ನೆಲದ ಮೇಲೆ ಚೆಲ್ಲಿತ್ತು. ಒಂದು ಮಾಡಲು ಹೋಗಿ ಇನ್ನೊಂದಾಗಿತ್ತು

Click below headings

Articles (42) oman (28) Story (23) Poems (14) History (12) Tour (10) Site Seeing (9) ಸುದ್ದಿ ಸ್ವಾರಸ್ಯ (7) ಹಾಸ್ಯ (7) Politics (6) Article (3) Health Tips (2)