ಭಾನುವಾರ, ಏಪ್ರಿಲ್ 17, 2022

ನೇಕಾರರ ಮೇಲಿನ ಬ್ರಿಟೀಷರ ಕ್ರೌರ್ಯ

  


ನೇಕಾರರ ಮೇಲಿನ ಬ್ರಿಟೀಷರ ಕ್ರೌರ್ಯ

ಕೇರಳದ ಸಂಸದರಾದ ಶಶಿ ತರೂರ್ ಅವರು 2015 ರಲ್ಲಿ ಸಂಸತ್ತಿನಲ್ಲಿ ಭಾಷಣ ಮಾಡುತ್ತನೇಕಾರರ ಮೇಲಿನ ಬ್ರಿಟೀಷರ ಕ್ರೌರ್ಯ ದ ಕುರಿತು ಪ್ರಸ್ತಾಪಿಸಿದ್ದರು. ಬಹುಶಃ  ಇತಿಹಾಸದ ಈ ಕ್ರೌರ್ಯ ಘಟನೆ ಕುರಿತು ಬಹುತೇಕ ಎಲ್ಲರೂ ಮರೆತಿದ್ದರು. ಬ್ರಿಟೀಷರು ನೇಕಾರರ ಕೈಯನ್ನು ಕತ್ತರಿಸಿದರುಹೆಬ್ಬೆರೆಳನ್ನ ಕತ್ತರಿಸಿದರು ಎನ್ನುವ ಘಟನೆ ಕುರಿತು ಹಲವಾರು ಕಾಲಘಟ್ಟದಲ್ಲಿ ಪ್ರಸ್ತಾಪಿಸಲಾಗಿದೆ. ಇದು ನಿಜ ಘಟನೆಯಾ ಎನ್ನುವ ಕುರಿತು ಹಲವಾರು ಚರ್ಚೆಗಳು ನಡೆದಿವೆ. ಆದರೂ ಬೆಂಕಿ ಇಲ್ಲದೆ ಹೊಗೆ ಆಡುವುದಿಲ್ಲ ಅಲ್ಲವೇಅದಲ್ಲದೇ ಸ್ವಾತಂತ್ರ್ಯ ಹೋರಾಟಗಾರರ ವಿರುದ್ಧ ಅಸಹ್ಯಕರತಾರತಮ್ಯ ಮತ್ತು ನಿರ್ಲಜ್ಜ ದೌರ್ಜನ್ಯಗಳನ್ನು ನಡೆಸಿ ಲಕ್ಷಾಂತರ ಜನರನ್ನ ಹಿಂಸಿಸಿ ಹತ್ಯೆ ಮಾಡಿದ ಕುಖ್ಯಾತಿ ಬ್ರಿಟೀಷರ ಮೇಲಿದೆ. ಯಾರು ಏನೇ ಹೇಳಲಿ,  ಈ ಘಟನೆ ನಡೆದೇ ಇಲ್ಲವೆಂದು ಹೇಳಲು ಸಾಧ್ಯವೇ  ಇಲ್ಲ. ಈ ಘಟನೆ ಏನುಎಲ್ಲಿ ನಡೆಯಿತುಇದರ ಕುರಿತು ಈ ಲೇಖನದಲ್ಲಿ ತಿಳಿಯೋಣ. 

ಭಾರತಕ್ಕೆ ಕಾಲಿಟ್ಟ ಬಹುತೇಕ ಪಾಶ್ಚ್ಯಾತರು ಅದರಲ್ಲೂ ಬ್ರಿಟೀಷರು ತಮ್ಮಲ್ಲಿನ ಉತ್ಪನ್ನಗಳನ್ನ ಇಲ್ಲಿ ಮಾರಾಟ ಮಾಡಲು ಬಹಳ ಪ್ರಯತ್ನ ಪಡುತಿದ್ದರು. ಮೊದ ಮೊದಲಿಗೆ ಇಲ್ಲಿನ ತಂತ್ರಜ್ನಾನಕರಕುಶಲಗಾರಿಕೆವಿದ್ಯೆನೀಡುವ ಗುರುಕುಲಗಳನ್ನ ಹೀಗೆ ಇಲ್ಲಿನ ದೇಶಿಯ ಮೂಲದ ಪ್ರತಿವಿಷಯವನ್ನ ಮೂಲೆಗುಂಪು ಮಾಡುವುದು ಮತ್ತು ತಮ್ಮ ಶ್ರೇಷ್ಟತೆಯನ್ನಜನರ ಮನಸಲ್ಲಿ ತುಂಬುವುದು. ಅವರು ಬಳಸುವ ವಸ್ತುಗಳು ಅತಿ ಶ್ರೇಷ್ಟ ಎಂದು ಜನರ ಮನಸ್ಸಿನಲ್ಲಿ ಬಿತ್ತುವುದು. ಅದು ಸಾಧ್ಯವಾಗದೇ ಇದ್ದಾಗಇಲ್ಲಿನ ಮೂಲತನವನ್ನೇ ನಾಶಮಾಡುವುದು ಇಂತಹ ಹಲವಾರು ಪ್ರಯೋಗಗಳನ್ನ ಮಾಡುತ್ತವಿರೋಧಿಸಿದವರನ್ನ ಹಿಂಸಿಸಿಹತ್ಯೆ ಮಾಡಿ ಜನರನ್ನು ಭಯಭೀತರನ್ನಾಗಿ ಮಾಡಿ ಸುಮಾರು ಮೂರು ಶತಮಾನಗಳ ಕಾಲ ಭಾರತವನ್ನಾಳಿದ ನಮ್ಮ ಮುಂದಿದೆ.

 

ವ್ಯವಸ್ಥಿತ ಸಂಚು: ಮೊದಲನೆಯದಾಗಿಘಟನೆ ನಡೆಯಲು ಕಾರಣ ಏನು ತಿಳಿಯೋಣ.  ಇಂಗ್ಲೆಂಡಿನಲ್ಲಿ ಜಿನ್ನಿಂಗ್ ಚಕ್ರದ ಆವಿಷ್ಕಾರದ ನಂತರಅವುಗಳ ಉತ್ಪಾದನಾ ಸಾಮರ್ಥ್ಯವು ಹಲವು ಪಟ್ಟು ಹೆಚ್ಚಾಗುತ್ತದೆ. ಬ್ರಿಟಿಷರ ಉತ್ಪನ್ನಗಳಿಗೆ ಭಾರತವನ್ನು ಮಾರುಕಟ್ಟೆಯಾಗಿಸಬೇಕಿತ್ತು. ಅದಕ್ಕಾಗಿ ಭಾರತೀಯ ಜನರು ಬ್ರಿಟಿಷ್ ಜವಳಿಗಳನ್ನು ಖರೀದಿಸಲು ಮತ್ತು ಭಾರತೀಯ ಗುಡಿ ಕೈಗಾರಿಕೆಯನ್ನು ಶಾಶ್ವತವಾಗಿ ತೆಗೆದುಹಾಕಲೇ ಬೇಕಿತ್ತು. ಈ ಆದೇಶ ಬ್ರಿಟನ್ ನಿಂದ ಆಗಿಂದಾಗ್ಗೆ ರವಾನೆಯಾಗುತಿತ್ತು.  ಬ್ರಿಟಿಷ್ ವ್ಯಾಪಾರಿಗಳಿಗೆ ಭಾರತದ ಬೃಹತ್ ಜನಸಂಖ್ಯೆಯು ಒಂದು ದೊಡ್ಡ ಆಸ್ತಿಯಾಗಿತ್ತುಅದೊಂದ್ದು ದೊಡ್ಡ ಮಾರುಕಟ್ಟೆ ಎಂದೇ ಭಾವಿಸಿದ್ದರು. ಬ್ರಿಟಿಷರ ಉತ್ಪನ್ನಗಳನ್ನು ಭಾರತದ ಮೂಲೆ ಮೂಲೆಗಳಿಗೆ ಕೊಂಡೊಯ್ಯಲು ಬ್ರಿಟಿಷ್ ಆಡಳಿತಗಾರರು ಸ್ಥಳೀಯ ಗುಡಿ ಕೈಗಾರಿಕೆಗಳನ್ನು ಎಲ್ಲ ರೀತಿಯಲ್ಲಿ ವಿರೋಧಿಸುವುದಿಕ್ಕೆ ಪ್ರಾರಂಭಿಸಿದ್ದರು.  ಅಂದಿನ ಕಾಲದಲ್ಲಿ ಬಂಗಾಳ ಸೇರಿದಂತೆ ಭಾರತದಲ್ಲಿ  ಮಸ್ಲಿನ್ ವಸ್ತ್ರಗಳು (ಅತಿಸೂಕ್ಷ್ಮ ನೆಯ್ಗೆಯ ಹತ್ತಿಯ ಬಟ್ಟೆ) ಬಹಳ ಪ್ರಖ್ಯಾತಿ ಪಡೆದಿದ್ದವು. 

ಬ್ರಿಟೀಷರು ತಂದ ಬಟ್ಟೆಗಳನ್ನ ಇಲ್ಲಿ ಕೊಳ್ಳುವವರೇ ಇರಲಿಲ್ಲ. ಬ್ರಿಟಿಷರು ತಮ್ಮ ಜವಳಿಗಳನ್ನು ಭಾರತದಲ್ಲಿ ಸುರಿಯಲು ಹೆಚ್ಚು ಉತ್ಸುಕರಾಗಿದ್ದರು ಮತ್ತು ಜವಳಿಗಳ ಸ್ಥಳೀಯ ಉತ್ಪಾದನೆಯನ್ನು ಬಹುತೇಕವಾಗಿ ವಿರೋಧಿಸುತಿದ್ದರು.  ಮೊದಲನೆಯ ಪ್ರಯತ್ನವಾಗಿ,  ಜನರು  ದೇಶೀಯ ಮಸ್ಲಿನ್ ಬಟ್ಟೆಗಳನ್ನು ಕೊಳ್ಳುವುದು ಕಡಿಮೆ ಮಾಡಬೇಕು  ಮತ್ತು ಮಸ್ಲಿನ್ ಬಟ್ಟೆಗಳ ಮೇಲಿನ ಅವಲಂಬನೆ ಕಡಿಮೆಯಾಗಬೇಕೆಂದು ಎನ್ನುವ ಉದ್ದೇಶದಿಂದ ಈ  ವಸ್ತ್ರಗಳ ಮೇಲೆ ಸರಿ ಸುಮಾರು 70-80% ತೆರಿಗೆಯನ್ನು ಹೇರುತ್ತಾರೆ. ಇಂತಹ ಅತಿ ದೊಡ್ಡ ತೆರಿಗೆಯಿಂದ ಜನರು ಸ್ವಾಭಾವಿಕವಾಗಿ ಈ ವಸ್ತ್ರಗಳನ್ನ ಕೊಳ್ಳುವುದಿಲ್ಲ.  ಅದಕ್ಕೆ ಪರ್ಯಾಯವಾಗಿ ಬ್ರಿಟನ್‌ನಿಂದ ಆಮದು ಮಾಡಿಕೊಂಡ ಫ್ಯಾಕ್ಟರಿ-ನಿರ್ಮಿತ  ಬಟ್ಟೆಗಳ ಮೇಲೆ ಅತಿಕಡಿಮೆ 2-4% ತೆರಿಗೆಯನ್ನು ವಿಧಿಸಿ ಮಾರುಕಟ್ಟೆಗೆ ತರುತ್ತಾರೆ. ಜನರಿಗೆ ಕಡಿಮೆ ವೆಚ್ಚದಲ್ಲಿ ಇಂಗ್ಲೇಡ್ ಮೂಲದಿಂದ ಬಟ್ಟೆಗಳು ಸಿಗುವಾಗ ಮಸ್ಲಿನ್ ಬಟ್ಟೆಗಳನ್ನ ಯಾಕೆ ಕೊಳ್ಳುತ್ತಾರೆ. 

ಈ ಮೂಲಕ ಮಸ್ಲಿನ್ ಉತ್ಪಾದನೆಯನ್ನು ಬ್ರಿಟೀಷರು ವ್ಯವಸ್ಥಿತವಾಗಿ ನಾಶಪಡಿಸುತ್ತಾರೆ.  ಇಂತಹ ಕಠೋರ ನೀತಿಗಳ ಪರಿಣಾಮವಾಗಿಮಸ್ಲಿನ್ ಉತ್ಪಾದನೆಯು ಗುಣಮಟ್ಟ ಮತ್ತು ಪ್ರಮಾಣದಲ್ಲಿ ಬಹಳವಾಗಿ ಕುಸಿತ ಕಂಡು ಕೊಳ್ಳುತ್ತದೆಅದು ಎಷ್ಟರ ಮಟ್ಟಿಗೆ ಎಂದರೆಮತ್ತೆಂದಿಗೂ ಆ ಉದ್ಯಮ ಚೇತರಿಸಿಕೊಳ್ಳುವುದೇ ಇಲ್ಲ. ಇದರ ನೇರ ಪರಿಣಾಮ ಅನುಭವಿಸಿದವರು ಬಂಗಾಳದ ನೇಕಾರರು ಮಾತ್ರ. ಅವರ ಬಳಿಯಿದ್ದ ಏಕೈಕ ಕೌಶಲ್ಯವೆಂದರೆ ಮಸ್ಲಿನ್ ನೇಯ್ಗೆಬ್ರಿಟೀಷರ ಇಂತಹ ಕಠಿಣ ನಿರ್ಧಾರದಿಂದ ನೇಕಾರರು ಕಡು ಬಡತನದಲ್ಲಿ ಮುಳುಗಿದರು ಮತ್ತು ಮಸ್ಲಿನ್ ನೇಯ್ಗೆಯ ಉದ್ಯಮವು ಸಂಪೂರ್ಣವಾಗಿ ನಾಶವಾಗುತ್ತದೆ. ಇಲ್ಲಿಗೆ ಬ್ರಿಟೀಷರ ಸಂಚು ವ್ಯವಸ್ಥಿತವಾಗಿ ಕಾರ್ಯಗತಕ್ಕೆ ಬಂದಿರುತ್ತದೆ 

 

ಕ್ರೌರ್ಯದ ಪರಮಾವಧಿ: ಬ್ರಿಟೀಷ್ ಆಳ್ವಿಕೆಯಲ್ಲಿ ಸ್ಥಳೀಯರ ವಿರುದ್ಧ ಬ್ರಿಟಿಷ್ ಆಡಳಿತನಿರ್ದಿಷ್ಟವಾಗಿರೈತರು ಮತ್ತು ನೇಕಾರರ ವಿರುದ್ಧ ಅಸಹ್ಯಕರತಾರತಮ್ಯ ಮತ್ತು ನಿರ್ಲಜ್ಜ ದೌರ್ಜನ್ಯಗಳನ್ನು ನಡೆಸುತ್ತಿದ್ದರು ಎನ್ನುವ ವಿಷಯ ಹಲವು ಕಡೆ ದಾಖಲಾಗಿವೆ. ಇಂಥಹ ಕಾರ್ಯಕ್ಕೆ ಬ್ರಿಟೀಷ್ ಆಡಳಿತ ಮತ್ತೊಮ್ಮೆ ಮುಂದಾಗುತ್ತದೆ. ನೇಕಾರರಿಗೆ ಅಳಿವು ಉಳಿವಿನ ಪ್ರಶ್ನೆಯಾಗಿದ್ದರಿಂದ ಅತಿ ಸೂಕ್ಷ್ಮ ಮಸ್ಲಿನ್ ನೇಯ್ಗೆ ನಶಿಸಿ ಹೋಗಬಾರದು ಎನ್ನುವ ಉದ್ದೇಶದಿಂದ ನೇಕಾರರು ಅಲ್ಲಲ್ಲಿ ನೇಯ್ಗೆ ಕೆಲಸ ಮಾಡುತಿದ್ದರು. ಇಂತಹ ಘಟನೆಗಳು ಬ್ರಿಟೀಷರಿಗೆ ಕಿರಿಕಿರಿ ಉಂಟು ಮಾಡುತಿದ್ದವು. ಇದಕ್ಕೆ ಅಂತ್ಯ ಕಾಣಿಸಲೇ ಬೇಕೆಂದು ಬಹುಶಃ ನಿರ್ಧರಿಸಿದ್ದರೆನಿಸುತ್ತದೆ ಹೀಗಾಗಿಮುಂದೆಂದೂ ಮಸ್ಲಿನ್ ಉತ್ಪನ್ನಗಳನ್ನು ನೇಯಲು ಸಾಧ್ಯ ವಾಗಬಾರದು ಎನ್ನುವ ಉದ್ದೇಶದಿಂದ 1769 ರ ಮಾರ್ಚ್ 17 ರಂದುಬ್ರಿಟಿಷ್ ಸರ್ಕಾರವು  ಬಡವರ ಬಗ್ಗೆ ಯಾವುದೇ ಕರುಣೆ ಇಲ್ಲದೆ,  ಬಂಗಾಳದ ಮಸ್ಲಿನ್ ನೇಕಾರರ ಹೆಬ್ಬೆರಳನ್ನು ಕತ್ತರಿಸಲು ಪ್ರಾರಂಭಿಸಿತು. ಈ ಘಟನೆ ನಡೆಯಲು ಶುರುವಾದಾಗಿನಿಂದನೇಕಾರರು ದೇಶದ ವಿವಿಧಭಾಗಗಳಿಗೆ ದಿಕ್ಕಾಪಾಲಾಗಿ ಓಡಿ ಹೋದರು.

ಈ ಘಟನೆಯ ಸಮಯದಲ್ಲಿ ಮುರ್ಷಿದಾಬಾದ್ ಮತ್ತು ನಾಡಿಯಾದಿಂದ  ನೇಕಾರರ ಕುಟುಂಬಗಳು ಅವಧ್‌ಗೆ ಓಡಿ ಹೋಗುತ್ತಾರೆಅಲ್ಲಿನ ನವಾಬ್ಬ್ ಅವರನ್ನು ಮಹುವಾ ದಬಾರ್‌ ಎನ್ನುವ ಪ್ರದೇಶದಲ್ಲಿ ಪುನರ್ವಸತಿ ಮಾಡಿ ಕೊಡುತ್ತಾರೆ ಮತ್ತು ಅವರ ಜೀವನೋಪಾಯವನ್ನು ಮುಂದುವರಿಸಲು ಅವಕಾಶ ಮಾಡುತ್ತಾರೆ. ಮೊದಲ ತಲೆಮಾರಿನ ಅನೇಕ ನೇಕಾರರು ಈಗಾಗಲೇ ತಮ್ಮ ಕೈಗಳನ್ನು ಕಳೆದುಕೊಂಡಿದ್ದರುನಂತರ ಅವರು ತಮ್ಮ ಪುತ್ರರಿಗೆ ಕರಕುಶಲತೆಯನ್ನು ಕಲಿಸುತ್ತಾರೆ. ಸುಮಾರು 5,000 ಜನರ ಆ ಸಣ್ಣ ಪಟ್ಟಣವು ಮತ್ತೆ ಕೈಮಗ್ಗ ಕೇಂದ್ರವಾಗಿ ಪ್ರಸಿದ್ದವಾಗುತ್ತದೆ.

 

ಆರದ ಕಿಚ್ಚು:  ದಶಕಗಳು ಕಳೆದರು ಆ ಘಟನೆಯ ಕಿಚ್ಚು ಮಾತ್ರ ಆರಿರರಿಲ್ಲ.  ಬಂಗಾಳದಿಂದ ವಲಸೆ ಬಂದ ಕುಟುಂಬದ ಕುಡಿಯೊಂದುಒಂದು ದಿನ ಆ ಪಟ್ಟಣದ  ಮನೋರಮಾ ನದಿಯ (ಘಾಗ್ರಾದ ಉಪನದಿ) ಕೆಳಗೆ ಬರುತ್ತಿರುವ ದೋಣಿಯನ್ನು ಗಮನಿಸುತ್ತಾನೆ. ಬ್ರಿಟೀಷರನ್ನ ಕಂಡ ಆ ಸಮಯದಲ್ಲಿ ತನ್ನ ಮನದ ಮೂಲೆಯಲ್ಲಿದ್ದ ಕಿಚ್ಚು ಬೆಂಕಿಯಂತಾಗುತ್ತದೆ. ಅದು ಮೊದಲೇ 1857 ರ ಪ್ರಕ್ಷುಬ್ಧತೆಯ (ಸಿಪಾಯಿ ದಂಗೆ) ಸಮಯ.  ಸಂತ್ರಸ್ತರ ಮೊಮ್ಮಕ್ಕಳು ಮತ್ತು ಸಂಬಂಧಿಕರು ಹೆಚ್ಚಾಗಿ ಅವಧ್‌ನ ಮಹುವಾ ದಬರ್‌ನ ನೇಕಾರರು ಎಲ್ಲರೂ ಒಟ್ಟಾಗಿ ಸೇರಿಪ್ರತೀಕಾರ ತೀರಿಸಿಕೊಳ್ಳಲು ಮುಂದಾಗುತ್ತಾರೆ.  ಆರು ಬ್ರಿಟೀಷ ಯೋಧರು ಲೆಫ್ಟಿನೆಂಟ್ ಟಿ.ಇ. ಲಿಂಡ್ಸೆಲೆಫ್ಟಿನೆಂಟ್ W.H. ಥಾಮಸ್ಲೆಫ್ಟಿನೆಂಟ್ G.L. ಕಾಲ್ಟಿಸಾರ್ಜೆಂಟ್ ಎಡ್ವರ್ಡ್ಸ್ ಮತ್ತು  A.F. ಇಂಗ್ಲೀಷ್ ಮತ್ತು T.J. ರಿಚಿ ಎನ್ನುವ ಕೆಲವು ಬ್ರಿಟಿಷ್ ತಲೆಗಳನ್ನು ಕತ್ತರಿಸಿ ಬಿಸಾಕುತ್ತಾರೆ.  ಎಂದು ಇತಿಹಾಸಕಾರರ ವರದಿಯಲ್ಲಿ ದಾಖಲಾಗುತ್ತದೆ.  ತದನಂತರ ಈ ಘಟನೆಯ ಪ್ರತಿಕಾರವಾಗಿ ಜೂನ್ 201857 ರಂದು ಬ್ರಿಟೀಷರ ಅಶ್ವಸೈನ್ಯವು ಪಟ್ಟಣವನ್ನು ಸುತ್ತುವರೆಯುತ್ತದೆಆ ಪಟ್ಟಣದ ನೂರಾರು ಜನರನ್ನು ಕೊಲ್ಲುತ್ತಾರೆ. ಮತ್ತು ಎಲ್ಲಾ ಮನೆಗಳಿಗೆ ಬೆಂಕಿ ಹಚ್ಚಿಅಂದಿನಿಂದ ಈ ಸ್ಥಳದಲ್ಲಿ ಯಾರೂ ವಾಸಿಸುವಂತಿಲ್ಲ ಎಂದು ಆದೇಶಿಸುತ್ತಾರೆ. ಬಂಡವಾಳಶಾಹಿಯ ಕ್ರೌರ್ಯ ಮತ್ತು ಅನಾಗರಿಕತೆಗೆ ಆ ಕಾಲದಲ್ಲಿ ಕೊನೆಯಿರಲೇಇಲ್ಲ.

 





ಈ ಎಲ್ಲಾ ಘಟನೆಗಳ ಕುರಿತು ಹಲವಾರು ಲೇಖಕರು ವಿವಿಧ ದಾಟಿಯಲ್ಲಿ ದಾಖಲಿಸಿದ್ದಾರೆ.  ಬ್ರಿಟೀಷ್ ವ್ಯಾಪಾರಿ ವಿಲಿಯಂ ಬೋಲ್ಟ್ಸ್  ತನ್ನ "ಕನ್ಸಿಡರೇಶನ್ಸ್ ಆನ್ ಇಂಡಿಯಾ ಅಫೇರ್ಸ್" ಪುಸ್ತಕದಲ್ಲಿ ನೇಕಾರರ ಬೆರಳುಗಳನ್ನು ಕತ್ತರಿಸುವುದು ಸೇರಿದಂತೆ ತೀವ್ರ ಕ್ರೌರ್ಯದ ನಿದರ್ಶನಗಳನ್ನು ದಾಖಲಿಸಿದ್ದಾರೆ.   Economic transition in the Bengal presidency, 1793-1833 - ಹರಿ ರಂಜನ್ ಘೋಸಲ್ ಎನ್ನುವ ಲೇಖಕರು ಸಹ ದಾಖಲಿಸಿದ್ದಾರೆ. ಇನ್ನೂ ಹಲವಾರು ಲೇಖಕರು ಇದರ ಕುರಿತು ದಾಖಲಿಸುತ್ತಾ ಬಂದಿದ್ದಾರೆ. ಬ್ರಿಟೀಷರು ಮಾತ್ರ ಇದ್ಯಾವುದೂ ನಡೆದೇ ಇಲ್ಲ ಎನ್ನುವಂತೆ ವರ್ತಿಸುತ್ತಾ ಬಂದಿದ್ದಾರೆ.

#Weavers #British #nekara #Bengal_Weavers

Click below headings