ಸೋಮವಾರ, ಮೇ 14, 2018

ಪರದೇಶದಲ್ಲಿ ಪರದೇಸಿಯಾಗಬೇಕಾಗಿಲ್ಲ

 ನಾ ಬರೆದ ಲೇಖನ, ವಿಶ್ವವಾಣಿ ಪತ್ರಿಕೆಯಲ್ಲಿ ಇಂದು (14/05/2018) ಪ್ರಕಟವಾಗಿದೆ

#Rampura, #jobsinabroad #Muscat #Oman #Kuwait, #ಪಿ.ಎಸ್.ರಂಗನಾಥ #p.s.ranganatha

ಭಾನುವಾರ, ಮೇ 6, 2018

ಎಂತ ಮಾಯಾವಿ ನೀನು

ಅಮವಾಸ್ಯೆ ರಾತ್ರಿಯಲ್ಲಿ
ಚಂದಿರನ ಕಾಣಿಸುವೆ ನೀನು

ತಂಪಾದ ರಾತ್ರಿಯಲ್ಲಿ
ಬೆಚ್ಚಗಾಗಿಸುವೆ ನೀನು

ಮೈ ಮನ ಬಳಲಿ ಬೆಂಡಾದಾಗ
ದಣಿವರಿಸುವೆ ನೀನು

ಕಷ್ಟ ದುಖಃ ಬಂದಾಗ,
ಎಲ್ಲವನ್ನು ಮರೆಸುವೆ ನೀನು

"ಎಣ್ಣೇ" ಎಂತ ಮಾಯಾವಿ ನೀನು

ಮೋದಿ: ಮದ್ಯಪಾನ ನಿಷೇದ

ಚುನಾವಣೆ ಪ್ರಚಾರಕ್ಕಾಗಿ ಕರ್ನಾಟಕ  ಮೋದಿ ಬಂದಾಗ, ಗುಂಡ ಮೋದಿಯವರನ್ನು ಭೇಟಿ ಮಾಡೋಕೆ ಹೋಗಿದ್ದ.  ಅಷ್ಟರಲ್ಲಿ, ಸೆಕ್ಯುರಿಟಿಯವರು ಗುಂಡನನ್ನ ತಡೆದರು. ನಾನು ಮೋದಿಯವರನ್ನು ಮೀಟ್ ಮಾಡಬೇಕಲೆ ಬೇಕು ಅಂದ. ಅಂಗೆಲ್ಲ ಆಗಲ್ಲ... ಪರ್ಮಿಶನ್ ಬೇಕು....
ಗುಂಡ ದರಣಿ ಕೂತ್ಕೊಂಡ, ವಿಷಯವನ್ನ ಮೋದಿಗೆ ಹೋಗಿ ಹೇಳಿದರು. ನಂತರ ಬೇಟಿಯ ವ್ಯವಸ್ಥೆಯಾಯಿತು.
ಮೋದಿಗೆ ಪ್ರಶ್ನೆ ಕೇಳಿದ, ನೀವು ನೋಟ್ ಬ್ಯಾನ್ ಮಾಡಿ ನನ್ನ ಲಕ್ಷಾಂತರ ದುಡ್ಡು ಲಾಸ್ ಮಾಡಿಬಿಟ್ಟಿರಿ, ಅದು ಬೇರೆ ಹದಿನೈದು ಲಕ್ಷ ಕೊಡ್ತಿನಿ ಅಂತ ಹೇಳಿದ್ದಿರಿ. ಅದನ್ನೂ ಹಾಕಲಿಲ್ಲ. ನಿಮ್ಮಿಂದ ನನಗೆ ತುಂಬಾ ನಷ್ಟವಾಗಿದೆ ಎಂದು ಹೇಳಿದ.....
ಮೋದಿಯವರು, ಗುಂಡನನ್ನ ಮೇಲಿಂದ ಕೆಳಗಿನವರೆಗೆ ಒಮ್ಮೆ ನೋಡಿ, ಈ ಬಾರಿ ಮತ್ತೊಂದು ಬ್ಯಾನ್ ಗೆ ದೊಡ್ಡ ಪ್ಲಾನ್ ನಡೀತಾ ಯಿದೆ.....
ಗುಂಡ: ಓಹ್ ಈ ಸಾರಿ ೨೦೦೦ ರೂಪಾಯಿ ಡಮಾರಾ...
ಮೋದಿ: ಅಲ್ಲ....
ಗುಂಡ:  ಓಹ್ ಬೇನಾಮಿ ಆಸ್ತಿ ನಾ......
ಮೋದಿ: ಅಲ್ಲ....
ಗುಂಡ: ಮತ್ತೆ......
ಮೋದಿ:  ಮದ್ಯಪಾನ ನಿಷೇದ....🍺✖
......
......
......
......

ದುಖಃ ತಡಿಲಾರದೆ......
ದೊರೆ, ಭಗವಂತ, ದೇವರೆ, ಮೋದಿ ಸಾಬ್ ನಿನಗೆ ಕೈ ಮುಗಿತೀನಿ🙏, ಬೇಕಿದ್ರೆ, ಸಿದ್ದರಾಮಯ್ಯ, ದೇವೆಗೌಡ, ಕುಮಾರಸ್ವಾಮಿ, ಡಿಕೆಶಿವಕುಮಾರ್ ಅವರೆಲ್ಲರ ಓಟ್ ಹಾಕಿಸಿಬಿಡ್ತಿನಿ, ದಯವಿಟ್ಟು 🍺🥂ಎಣ್ಣೆಗೆ ಮಾತ್ರ ಕೈ ಹಾಕಬೇಡಪ್ಪ. ಗೋಳೋ ಅಂತ ಕಣ್ಣೀರಿಟ್ಟ........😭😭😭

ಅಂದು ಅಮ್ಮ ನನ್ನ ಹೆಂಡತಿಯ ಕೈ ಹಿಡಿದು,

ಅಂದು ಅಮ್ಮ ನನ್ನ ಹೆಂಡತಿಯ ಕೈ ಹಿಡಿದು,
ಇವನನ್ನ ಮೂವತ್ತು ವರ್ಷ ಸಾಕಿ ಮುತ್ತಿನಂತೆ ನೋಡಿಕೊಂಡಿದ್ದೀನಿ. ಈಗ ಇನ್ಮುಂದೆ ಚೆನ್ನಾಗಿ ನೋಡಿಕೊಳ್ಳೊದು ನಿನ್ನ ಜವಬ್ದಾರಿ ಎಂದು ಹೇಳಿದ್ದಳು

ಇಂದು ನನ್ನ ಹೆಂಡತಿ ನನ್ನ ಸೊಸೆ ಕೈ ಹಿಡಿದು, ನೋಡು ನಿಮ್ಮ ಮಾವನನ್ನ ಮೂವತ್ತು ವರ್ಷ ಸಾಕಿದ್ದೀನಿ, ಈಗ ಇನ್ಮುಂದೆ ಅವರ ಕೊನೆ ಉಸಿರಿರುವವರಗೂ ಚೆನ್ನಾಗಿ ನೋಡಿಕೊಳ್ಳೊದು ನಿನ್ನ ಜವಬ್ದಾರಿ ಎಂದಳು.

ನನ್ನ ಕಣ್ತುಂಬಿ ಬಂತು......
ಮಗಳೇ ಊಟಕ್ಕೆ ಮುಂಚೆ, ಮರಿಯದೆ
 ಒಂದು 90, ನೆಂಚಿಕೊಳ್ಳೋಕೆ ಚಿಪ್ಸ್ ಅಥವಾ ಉಪ್ಪಿನಕಾಯಿ ಕೊಡೋದನ್ನ ಮರಿಬೇಡಮ್ಮ 🙏

Click below headings