ಗುರುವಾರ, ನವೆಂಬರ್ 25, 2010

ಇದು ಯಾರು ಬರೆದ ಕಥೆಯೊ!

"ಏನ್ರೀ ಸಿದ್ದಣ್ಣ ಎಲ್ರಿ ನಿನ್ನೆ ಕಾಣಲೆ ಇಲ್ಲ ಏನು ಅಷ್ಟೊಂದು ಕೆಲಸನ? ಏನ್ ಸಮಚಾರ?".
"ಅಯ್ಯೊ ಏರ್ಪೋಟಿಗೆ ಹೋಗಿದ್ದೆ ಸಾರ್".
"ಏರ್ಪೋಟಿಗೆ ಯಾಕ್ರಿ ಹೋಗಿದ್ರಿ, ಯಾರ್ನಾದ್ರು ರಿಸೀವ್ ಮಾಡಿಕೊಳ್ಳೋಕೆ ಹೋಗಿದ್ರ? "
"ಅದೇ ನಮ್ಮ್ ಸಿಯೆಮ್ ಬರ್ತಾರೆ ಅಂತ ಶೋಭಾಯಾತ್ರೆ ಗೆ ತಯಾರಿ ಮಾಡಿದ್ದೆ. ಆದರೆ ಆಯಪ್ಪ ಹೊಸ ಏರ್ಪೋಟ್ಗೆ ಬರದೆ, ಹಳೆ ಏರ್ಪೋಟಿಗೆ ಬಂದ್ರು. ಅಲ್ಲಿ ಬೇರೆಯಾತ್ರೆ ನೆ ಮಾಡಿದ್ರು."
"ಕೊನೆಗೂ ಸೀಟು ಉಳಿಸಿ ಕೊಂಡು ಬಂದ್ರಲ್ಲ, ಬಿಡಪ್ಪ ಅವರನ್ನು ಅವರಪಾಡಿಗೆ ಸ್ವಲ್ಪ ಕೆಲಸ ಮಾಡಿಕೊಂಡು ಇರಲಿ. ಇನ್ಮುಂದೆ ಶೋಭಾಯಾತ್ರೆ, ಸ್ವಜನ ಪಕ್ಷಪಾತ ಏನು ಮಾಡಲ್ಲಂತೆ"
"ಅಲ್ಲ ಸಾರ್ ನಿನ್ನೆ ಪೇಪರ್ ನಲ್ಲಿ ಯಡ್ಯೂರಪ್ಪ ನವರ ಅತ್ತಿಗೆ ಒಂದು ಮಾತು ಹೇಳಿದ್ದಾರೆ " ತಿಂದೇ ಇರೋರು ಯಾರವರೆ, ಇವತ್ತು ಯಾರ್ಯಾರು ಆರೋಪ ಮಾಡ್ತಾವ್ರೊ ಅವರೆಲ್ಲ ನಿಯತ್ತನವರ? ಅವರಿಗೊಂದು ನ್ಯಾಯನ, ನಮಗೊಂದು ನ್ಯಾಯಾನ" ಆಮೇಲೆ ಇನ್ನೊಬ್ರು ಹೇಳಿದ್ದಾರೆ ಬೇರೆಯವರೆಲ್ಲ ಬೇನಾಮಿ ಹೆಸರಲ್ಲಿ ಇವರೆಲ್ಲ ಆಸ್ತಿ ಮಾಡ್ತಾರೆ, ಇವರು ಡೈರೆಕ್ಟಾಗಿ ಮಾಡಿದ್ದಾರೆ. ಅಷ್ಟೆ ವ್ಯತ್ಯಾಸ, ಆರೋಪ ಮಾಡುವವರಿಗೆ ನೈತಿಕತೆ ಇದೆಯಾ. ಅಕ್ರಮ ಸಂಭಂದ, ಅಕ್ರಮ ಸಂತಾನ ಇಟ್ಕೊಂಡು ಅದೂ ಅಲ್ಲದೆ ಬೇಕಾದ ಸಂಖ್ಯೆಯ ಶಾಸಕರಿಲ್ಲದೆ ಇದ್ರು ವಾಮ ಮಾರ್ಗ ದಲ್ಲಿ ಅಧಿಕಾರ ಹಿಡಿದು ರಾಜ್ಯಭಾರ ಮಾಡಿದ್ರು, ಮತ್ತೆ ಇವತ್ತು ಸರಕಾರ ಕೆಡವೋಕೆ ಎಷ್ಟೆಲ್ಲ ಸರ್ಕಸ್ ಮಾಡ್ತಾರೆ ಇವ್ರಗೆ ಯಾವ ನೈತಿಕತೆ ಯಿದೆ ಸಾರ್"
"ಅಲ್ರೀ ಸಿದ್ದಣ್ಣ, ಕೊನೆಗೂ ಯಡಿಯೂರಪ್ಪ ನವರನ್ನು ಸಮರ್ಥನೆ ಮಾಡ್ತೀರಲ್ರಿ, ಕುರ್ಚಿ ಬೇಕು ಅಂತ ಜಿಗಣೆ ತರಹ ಕಚ್ಚಿಕೊಂಡು ಕೂತಿದಾರಲ್ವ. ನಾನು ತಪ್ಪು ಮಾಡಿದ್ದೀನಿ ಅಂತ ಅವರೆ ಒಪ್ಪಿ ಕೊಂಡಿರಬೇಕಾದ್ರೆ ಪ್ರಾಯಶಿತಕ್ಕೊಸ್ಕರ ರಾಜಿನಾಮೆ ಕೊಡಬಹುದಲ್ವ. ಇವರಿಗೆ ಯಾವ ನೈತಿಕತೆ ಇದೆ. ನಿಯತ್ತಾದ ಮನುಷ್ಯ ಸುರೇಶ್ ಕುಮಾರ್ ಇದ್ದರು ಅವರು ಸಿಎಮ್ ಆಗಿದ್ದಿದ್ದರೆ ಏನಾಗ್ತಿತ್ತು. ಎಲ್ಲರು ಬಾಯ್ಮುಚ್ಚಿಕೊಂಡು ಕೂತಿರ್ತಿದ್ದ್ರು, ಈಗೇನು ವಿರೋಧ ಪಕ್ಷದವರು ಸುಮ್ಮನೆ ಇರ್ತಾರ, ಅವರು ಕುರ್ಚಿಯಿಂದ ಇಳಿಯೋತನಕ ಏನಾದ್ರು ತೊಂದರೆ ಕೊಡೋದು ತಪ್ಪಲ್ವಲ್ಲ. ನಮ್ಮ ಕರ್ಮ ಇವರ ಎಲ್ಲ ರಾಜಕೀಯ ದೊಂಬರಾಟ ಗಳನ್ನು ನಾವು ನೋಡ್ತಾಯಿರಬೇಕು. ಹೋಗ್ರಿ ಸಾಕು ಈ ಹೊಲಸು ರಾಜಕೀಯ."
"ಇಷ್ಟಕ್ಕೆ ಬೇಜಾರು ಮಾಡಿಕೊಂಡರೆ ಹೆಂಗೆ ಸಾರ್, ಬೇರೆ ಏನು ದಾರಿ ಯಿದೆ. ಸಾಯೊವರೆಗು ಇದನ್ನೆಲ್ಲ ನೋಡಿ ಅನುಭವಿಸಬೇಕು ಅದು ನಮ್ಮ ಕರ್ಮ ಅಲ್ವಾ ಮತ್ತೆ". "ನನಗೊಂದು ಐಡಿಯ ಬಂದಿದೇರಿ, ಮತಚಲಾವಣೆ ಸಂಧರ್ಬದಲ್ಲಿ ಒಬ್ಬರು ಮಿಲ್ಟ್ರಿ ಕ್ಯಾಂಡಿಡೇಟ್ ಗೆ ಮತ ಹಾಕೊದಿಕ್ಕೆ ಒಂದು ಅವಕಾಶ ಕೊಡಬೇಕು, ನಮಗೆ ಈ ರಾಜಕೀಯದವರು ಬೇಡ ಮಿಲ್ಟ್ರಿ ಯವರು ಬೇಕು ಅಂತ ಯಾರು ಬಯಸುತ್ತಾರೊ ಅವರು ಅದನ್ನು ಆಯ್ಕೆ ಮಾಡಬಹುದು, ಏನಂತೀರಾ"
"ಸಾರ್ ಒಳ್ಳೆ ಐಡಿಯ. ನನಗೊಂದು ಇನ್ನು ಒಂದು ಒಳ್ಳೆ ಐಡಿಯ ಬರ್ತಾ ಯಿದೆ"
"ಏನಪ್ಪಾ ಅದು"
"ಇನ್ಫೊಸಿಸ್, ವಿಪ್ರೊ, ಆಮೇಲೆ ಬೇರೆ ಬಹುರಾಷ್ಟ್ರಿಯ ಕಂಪನಿಯವರು ನಮ್ಮ ಸರ್ಕಾರಿ ಕಂಪನಿ ಗಳಿಗಿಂತ ಅವರ ಚೆನ್ನಾಗಿ ಕಂಪನಿಗಳನ್ನು ನಡೆಸಿ ಒಳ್ಳೆ ಹೆಸರು ಮತ್ತು ಲಾಭ ಮಾಡ್ತಾ ಯಿದ್ದಾರೆ, ಇಂತಹ ಕಂಪನಿಗಳನ್ನು ಅದರಲ್ಲಿ ಯಾಕೆ ಸೇರಿಸಬಾರದು, ಒಳ್ಳೇ ಆಡಳಿತ ಕೊಡಬಹುದಲ್ವ"
"ನಿಮ್ಮ ಐಡಿಯ ಆಗಲೆ ಅನ್ ಅಫಿಸಿಯಲ್ ಆಗಿ ವರ್ಕ್ ಔಟ್ ಆಗ್ತಾಯಿದೆ.
"ನಿಜವಾಗ್ಲುನ? ಎಲ್ಲಿ ಸಾರ್"
"ಅದೇ ಸೆಂಟ್ರಲ್ ಗೌರ್ನ್ಮೆಂಟ್ ನಲ್ಲಿ, ಆಗಲೆ ಸೆಂಟ್ರಲ್ ನಲ್ಲಿ ಕಳೆದ ೬ ವರ್ಷಗಳಿಂದ ನಡಿತಾ ಯಿದೆ"
"ಅದು ಹೆಂಗೆ, ಅಲ್ಲಿರೋದು ಕಾಂಗ್ರೆಸ್ ಗೌರ್ನ್ಮೆಂಟ್, ಮನಮೋಹನಸಿಂಗ್ ಪಿಎಮ್ "
"ಅದೊಂದು ದೊಡ್ಡ ಕಥೆ ಯಿದೆ, ಅಲ್ಲಲ್ಲಿ ಗುಸು ಗುಸ್ ಕೇಳಿದ್ದು. ನಾನು ಹೇಳಲ್ಲರಿ ಅದರ ಒಳ ಅರ್ಥ ನೀವೆ ಅರ್ಥ ಮಾಡ್ಕೋಬೇಕು"
"ಸಾರ್ ಹುಳ ಬಿಟ್ರಲ್ಲ ನೀವು, ಸ್ವಲ್ಪ ಬಿಡಿಸಿ ಹೇಳಿ"
" ಜನತಾ ಪಕ್ಷದ ಸುಬ್ರಮಣ್ಯ ಸ್ವಾಮಿ ಯವರನ್ನು ಕೇಳಿ, ಮತ್ತೆ ಅರ್ ಎಸ್ ಎಸ್ ನ ಸುದರ್ಶನ್ ಅವರನ್ನು ಕೇಳಿದರೆ ಎಲ್ಲ ಹೇಳ್ತಾರೆ"
"ಬಿಡಿ ಸಾ ಅದೆಲ್ಲ ದೊಡ್ಡವರ ವಿಚಾರ, ನಮಗ್ಯಾಕೆ. ಇವತ್ತು ಯಾವ ಹಗರಣ ಬಯಲಿಗೆ ಬರುತ್ತೊ ಆ ದೇವರಿಗೆ ಗೊತ್ತು, ನಮ್ಮ ಕುಮಾರಸ್ವಾಮಿ ಇನ್ನು ಏನು ಹುಡುಕ್ತಾ ಯಿದ್ದಾರೊ, ಏನು ಕಥೆಯೊ"
"ಒಂದು ವಿಷಯ ಗೊತ್ತ ನಿಮಗೆ, ಇಷ್ಟು ದಿನ ಇಲ್ಲದೆ ಇದ್ದ ಹಗರಣ ಗಳ ಕ್ಯಾತೆ, ಈಗ ಒಮ್ಮಿಂದೊಮ್ಮಲೆ ಹ್ಯಾಗೆ ಹೊರಗೆ ಬರ್ತಾಯಿದೆ ಗೊತ್ತಾ"
"ಗೊತ್ತು ಸಾರ್, ಶಾಸಕರ ಬಂಡಾಯ ಆಯ್ತು ಸರಕಾರ ಬೀಳಿಸಲಿಕ್ಕೆ ಅದು ವರ್ಕ್ ಔಟ್ ಆಗಲಿಲ್ಲ. ಅದಕ್ಕೆ ಈ ಹೊಸ ಬಾಂಬು ಗಳು, ಇನ್ನೊಂದು ವಿಶಯ ಗೊತ್ತಾ. ನಿಮಗೆ ಶಮಿಕಾ. ಕೆ. ಸ್ವಾಮಿ ಗೊತ್ತಾ.
"ಇಲ್ವಲ್ಲ"
"ನಟಿ ರಾಧಿಕಾ ಅವರ ಮಗಳು, ಹೆಸರಲ್ಲಿ ಕೆ, ಸ್ವಾಮಿ ಅಂದರೆ ಏನು ಗೊತ್ತಾ? ಅದು ಬಿಡಿ. ಇವತ್ತು ಮಂಗಳೂರಿನ ಬಿ.ಜೇ.ಪಿ ಜಿಲ್ಲಾಧ್ಯಕ್ಷರು ಹೊಸ ಬಾಂಬ್ ಹಾಕಿದ್ದಾರೆ, ರಾಧಿಕಾ ಕುಮಾರಸ್ವಾಮಿ ಹೆಸರಲ್ಲಿ ಬೇನಾಮಿ ಯಾಗಿ ೩೦ ಕೋಟಿ ಆಸ್ತಿ ಇದೆ ಅಂತ. ಇನ್ನು ಎಲ್ಲೆಲ್ಲಿ ಬೇನಾಮಿ ಯಾಗಿ ಏನು ಇಟ್ಟಿದ್ದಾರೊ ದೇವರಿಗೆ ಗೊತ್ತು. ನೀವು ಹೇಳಿದಂಗೆ ರಾಜಕೀಯ ಹೊಲಸು ಸಾರ್, ಕೊನೆಗೆ ಒಂದು ಮಾತು, ನಮ್ಮ ಮಾಧ್ಯಮ ಗಳಿಗೆ ಕಳೆದ ಹದಿನೈದು ದಿನ ಗಳಿಂದ ಬೇರೆ ಸುದ್ದಿನೆ ಇರಲಿಲ್ಲ ಸಾರ್, ಬರೀ ಹಗರಣದ ಸುದ್ದೀನೆ ಜತೆಗೆ ಯಡ್ಡಿ ಉಳಿತಾರ ಹೊಗ್ತಾರಾ? ರಾಜಕೀಯ ದವರೆಗೆ ಇಲ್ಲದ ಟೆನ್ಶನ್ ನಮ್ಮ ಮಾದ್ಯಮದವರಿಗೆ ಇತ್ತು, ಅವರು ಬದಲಾಗಲ್ಲ ಇವರು ಬದಲಾಗಲ್ಲ. ಎಲ್ಲ ನಮ್ಮ ಕರ್ಮ. ಇದು ಯಾರು ಬರೆದ ಕಥೆಯೊ ನಮಗಾಗಿ ಬಂದ ವ್ಯಥೆಯೊ!.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

Click below headings