ಗುರುವಾರ, ಸೆಪ್ಟೆಂಬರ್ 2, 2010

ಒಂದು ಕೆಲಸ ಮಾಡಲು ಹೋಗಿ ಇನ್ನೊಂದು ಮಾಡಿದರು

ಅಂದು ಬಾನುವಾರ ರಜಾದಿನವಾದ್ದರಿಂದ ಗುಂಡ ಮನೆಯಲ್ಲಿ ಸುಮ್ಮನೆ ಕುಳಿತಿದ್ದ. ಬೇಜಾರು ಆಗುತ್ತಿದೆ ಏನಾದರು ಕೆಲಸ ಮಾಡಿಕೊಡುತ್ತೇನೆ ಎಂದು ಹೆಂಡತಿ ಗುಂಡಿ ಯನ್ನು ಕೇಳಿದ. ಆದರೆ ಗುಂಡಿಗೆ ಇವರು ಮಾಡುವ ಅವಾಂತರ ಗಳು ಗೊತ್ತಿದ್ದರಿಂದ, ಒಂದು ಕೆಲಸ ಮಾಡಲು ಹೋಗಿ ಇನ್ನೊಂದು ಮಾಡ್ತೀರ ಎರಡೆರಡು ಕೆಲಸಗಳನ್ನು ಕೊಡುತ್ತೀರ, ಏನು ಬೇಡ ಸುಮ್ಮನೆ ಇದ್ದರೆ ಸಾಕು ಎಂದಳು. ಆದರೆ ಗುಂಡ ಸುಮ್ಮನಿರಲಾರದಾದ. "ನೋಡೆ ಗುಂಡಿ ಮನೆ ಮೇಲೆ ಸಿಂಟೆಕ್ಸ್ ಟ್ಯಾಂಕ್ ತೊಳೆದು ವರ್ಷಾನುಗಟ್ಟಲೆ ಆಗಿ ಹೋಗಿದೆ, ಆ ಕೆಲಸನಾದ್ರು ನಾನು ಮಾಡ್ತಿನಿ ಅದಕ್ಕೂ ಬೇಡ ಅನ್ನಬೇಡ" ಎಂದು ಮಹಡಿಯ ಮೇಲೆ ಹೊದ. ಹೌದಲ್ವ ತುಂಬಾ ದಿನ ಆಯಿತು ಕ್ಲೀನ್ ಮಾಡಿ, ಹೋಗಲಿ ಬಿಡು ಅಂತ ಒಪ್ಪಿಗೆ ಕೊಟ್ಟಳು. ಇವರ ಸಂಭಾಷಣೆ ಕೇಳಿಸಿಕೊಂಡಿದ್ದ ಮಗ ಚಿಕ್ಕ್ಗುಂಡ, ನಾನು ಸಹ ಬರ್ತಿನಿ ಎಂದು ಜತೆಯಲ್ಲಿ ಹೊರಟ. ಟ್ಯಾಂಕಿನ ಒಳಗಡೆ ಇಳಿಯೋಣ ವೆಂದು ಪ್ರಯತ್ನಿಸಿದ ಅದರೆ ಅದರ ಬಾಯಿ ಚಿಕ್ಕದಿದ್ದರಿಂದ ಒಳಗಡೆ ಇಳಿಯಲಿಕ್ಕಾಗಲಿಲ್ಲ. ಕೊನೆಗೆ ಯೋಚಿಸಿ ಮಗನಿಗೆ ಇಳಿಯಲು ಹೇಳಿ, ತೊಳೆಯಲು ಸೂಚನೆಗಳನ್ನು ಕೊಟ್ಟರೆ ಕೆಲಸ ಸಲೀಸಾಗಿ ಮಾಡಬಹುದು ಎಂದು ಭಾವಿಸಿ ಮಗನನ್ನು ಅರ್ಧ ತುಂಬಿದ್ದ ಟ್ಯಾಂಕಿನಲ್ಲಿ ಮಗನನ್ನು ಇಳಿಸಿದ, ಎಚ್ಚರಿಕೆಯನ್ನು ಕೊಡುತ್ತ "ಮಗನೇ ಒಂದು ಕೆಲಸ ಮಾಡಲು ಹೋಗಿ ಇನ್ನೊಂದು ಮಾಡಿ. ಎರಡೆರಡು ಕೆಲಸಗಳನ್ನು ಕೊಡಬೇಡ, ಇಲ್ಲದೆ ಇದ್ದರೆ ನಿಮ್ಮ ಅಮ್ಮ ನಿನಗೆ ಸೇರಿಸಿ ನನಗೂ ಬಾರಿಸುತ್ತಾರೆ"ಟ್ಯಾಂಕಿನಲ್ಲಿರುವ ನೀರು ಬಿಸಿಲಿಗೆ ಕಾದಿದ್ದರಿಂದ ಒಳಗಡೆ ಬೆಚ್ಚಗೆಇತ್ತು,  ಚಿಕ್ಕ್ಗುಂಡ ನೀರು ಬೆಚ್ಚಗಿದೆ ಎಂದು ಅದರಲ್ಲಿ ಆಟವಾಡೊದಿಕ್ಕೆ ಶುರು ಮಾಡಿದ. ಅಷ್ಟರಲ್ಲಿ ಗುಂಡಿ ಬಂದು, ಒಂದೆರಡು ಬಿಂದಿಗೆ ನೀರು ತುಂಬಿಸಿಕೊಂಡು ಬಿಡ್ತೀನಿ, ಎನಾದರು ತೊಳೆಯೊದಿಕ್ಕೆ ಬೇಕಾಗಬಹುದು, ಆಮೇಲೆ ಬೇಕಾದರೆ ನೀವು ತೊಳೆದುಕೊಳ್ಳಿ, ಎಂದು ದಡಬಡನೆ ಹೋದಳು. ನೀರು ಕಲಕಿದರೆ ಗಲೀಜಾಗಬಹುದು ಎಂದು ಕೊಂಡು ಗುಂಡ ಮಗನಿಗೆ ಸ್ವಲ್ಪ ಹೊತ್ತು ಸುಮ್ಮನೆ ಕೂತಿರಲು ಹೇಳಿದ. ಒಂದೈದು ನಿಮಿಷ ಹಾಗೆ ನೀರಿನಲ್ಲಿ ಕುಳಿತಿದ್ದರಿಂದ, ಚಿಕ್ಗುಂಡನ ಮೈ ನೊಚ್ಚಗಾಗುತಿತ್ತು. ಆದರೆ ಮೆಲ್ಲಗೆ ಅವನಲ್ಲಿ ಅರ್ಜೆಂಟಾಗಿ ಉಚ್ಚೆ ಹುಯ್ಯಬೇಕು ಅನ್ನಿಸಿತು. ಸ್ವಲ್ಪ ಹೊತ್ತಿನ ನಂತರ ಹೊರಗಡೆ ಹೋಗಿ ಮಾಡಿದರಾಯಿತು ಎಂದು ಕೊಂಡು ಸುಮ್ಮನಾಗುವಷ್ಟರಲ್ಲಿ, ಲೇ ಚಿಕ್ಕ್ಗುಂಡ ಟ್ಯಾಂಕ್ ನೀರಿನಲ್ಲಿ ಒಂದು ಮಾಡೊಕೆ ಹೋಗಿ ಇನ್ನೊಂದು ಮಾಡಿದರೆ ಒದೆ ಬಿಳುತ್ತೆ ನೋಡು" ಎಂದನು. ಚಿಕ್ಕ್ಗುಂಡ ಅದನ್ನು ತಪ್ಪಾಗಿ ಅರ್ಥೈಸಿಕೊಂಡು ಆಯಿತು ಪಪ್ಪ, ಉಚ್ಚೆ ಮಾತ್ರ ಮಾಡ್ತೀನಿ ಕಕ್ಕ ಮಾಡಲ್ಲ, ಎಂದು ತನ್ನ ಪಾಡಿಗೆ ಟ್ಯಾಂಕಿನಲ್ಲಿ ಮೂತ್ರ ವಿಸರ್ಜನೆ ಮಾಡಿದ. ಮಾಡಿದ ಮೇಲೆ, ಆಯಿತು ಪಪ್ಪ ಎಂದನು. ಏನೊ ಆಯಿತು ಎಂದರೆ, ಅದೇ ನೀವು ಹೇಳಿದರಲ್ಲ "ಒಂದು ಮಾತ್ರ ಮಾಡು ಎರಡು ಮಾಡಬೇಡ ಅಂದ್ರಲ್ಲ, ಅದಕ್ಕೆ ಉಚ್ಚೆ ಹುಯಿದೆ". ಅಯ್ಯೊ ಕರ್ಮ ಇವತ್ತು ನಮಗೆ ಗ್ರಹಚಾರ ಕಾದಿದೆ ಅಂದುಕೊಂಡು ದಡಬಡಾಯಿಸಿ ಅಡಿಗೆ ಮನೆಕಡೆ ಓಡಿದ. ಆದರೆ ಅಲ್ಲಿ ಗುಂಡಿ ಸಿಂಕ್ ನಲ್ಲಿ ಬಿಂದಿಗೆ ತುಂಬಿಸಿಕೊಂಡು ಕೈಯಲ್ಲಿ ಹಿಡಿದಿದ್ದಳು. "ನಿನ್ನ ಮಗ ಟ್ಯಾಂಕಿನಲ್ಲಿ ಉಚ್ಚೆ ಹುಯಿದು ಬಿಟ್ಟಿದ್ದಾನೆ, ನೀರೆಲ್ಲ ಗಲೀಜಾಗಿದೆ ನೀರು ತುಂಬಿಸುಬೇಡ ನಿಲ್ಲಿಸು ಎನ್ನಿಸುವಷ್ಟರಲ್ಲಿ, ಕೈಯಲ್ಲಿ ಹಿಡಿದಿದ್ದ ಬಿಂದಿಗೆ ಕೆಳಗೆ ಬಿದ್ದು, ನೀರೆಲ್ಲ ನೆಲದ ಮೇಲೆ ಚೆಲ್ಲಿತ್ತು. ಒಂದು ಮಾಡಲು ಹೋಗಿ ಇನ್ನೊಂದಾಗಿತ್ತು

1 ಕಾಮೆಂಟ್‌:

Click below headings