ಶನಿವಾರ, ಫೆಬ್ರವರಿ 28, 2015

"ದೇವರು ಅಷ್ಟೊಂದು ಕ್ರೂರಿನಾ?" ಸಣ್ಣ ಕಥೆ ಯನ್ನು ಕುರಿತು


"ದೇವರು ಅಷ್ಟೊಂದು ಕ್ರೂರಿನಾ?" ಈ ಸಣ್ಣ ಕಥೆ ಯಲ್ಲಿ ಸಮಾಜ ಮತ್ತು ಬದುಕಿನ ಹಲವಾರು ಮುಖ ಗಳನ್ನು ಕಾಣುವ ಪ್ರಯತ್ನ ಇಲ್ಲಿ ಮಾಡಬಹುದು. ಇಲ್ಲಿ ದೇವರ ಅಸ್ತಿತ್ವದ ಪ್ರಶ್ನೆ ಸಹ ಉಧ್ಭವ ವಾಗುತ್ತೆ. ಜೀವನಾಧಾರಕ್ಕೆ ವ್ಯವಸಾಯವನ್ನು ಅವಲಂಬಿಸಿರುವ ರೈತರ ಬದುಕಿನ ಅನಾವರಣ ಸಹ ಆಗುತ್ತೆ. ಹಲವಾರು ವರ್ಷಗಳಿಂದ ದೇಶ ವನ್ನು ಕಾಡುತ್ತಿರುವ ರೈತರ ಆತ್ಮಹತ್ಯೆ ಯಂತಹ ಗಂಭೀರ ಸಮಸ್ಯೆ ಸಹ ಈ ಕಥೆ ಸ್ಪರ್ಶಿಸುತ್ತೆ ಅನ್ನುವುದು ವಿಶೇಷ. ಮುಗ್ಧ ಮನಸ್ಸಿನ ಮಗುವಿನ ಪ್ರಶ್ನೆ ಹಲವಾರು ವಿಷಯಗಳ ಚಿಂತನೆಗೆ ಕಾರಣ ಸಹ ಆಗುತ್ತೆ. 


ಹಳ್ಳಿಯ ರೈತಾಪಿ  ಜನರು ಎದುರಿಸುವ ಸಮಸ್ಯೆ ಯ ಒಂದು ಸಣ್ಣ ಎಳೆ ಸಾಕು ಅಲ್ಲಿರುವ ಸಮಸ್ಯೆ ಗಳನ್ನು ಅರ್ಥ ಮಾಡಿಕೊಳ್ಳುವುದಕ್ಕೆ. ಸರ್ಕಾರಗಳು ಏನೆಲ್ಲ ಯೋಜನೆಗಳನ್ನು ತಂದರೂ ಸಹ ಸಂಪೂರ್ಣವಾಗಿ ಸಮಸ್ಯೆಗಳನ್ನು ಬಗೆಹರಿಸಲು, ಎಲ್ಲರನ್ನು ಸಂತೋಷವಾಗಿಡಲು ಸರ್ಕಾರ, ಜನಸಾಮಾನ್ಯ, ಹಾಗು ದೇವರಿಂದಾಗಲಿ ಸಾಧ್ಯವಿಲ್ಲವೇನು ಎನ್ನುವುದು ಎನ್ನುವುದು ಕಟು ವಾಸ್ತವ.

ನಮ್ಮ ಸಮಾಜದಲ್ಲಿ  "ಕ್ಷಮೆ, ಕರುಣೆ, ಸ್ಪಂದನೆ, ತ್ಯಾಗ" ಮನುಷ್ಯನಿಗೆ ಸಂಭಂಧಿಸಿದ ಇನ್ನು ಮುಂತಾದವುಗಳ ಬಗ್ಗೆ ಬಲು ಬೆಲೆಯಿದೆ, ಆದರೆ ಪೂರ್ವ ಜನ್ಮದ ಕರ್ಮ ಫಲ ವಿಷಯದ ಕುರಿತು ಕಳೆದ ಜನ್ಮದ ಪಾಪದ ಫಲದ ವನ್ನು  "ಈ ಒಂದು ಸಂಪೂರ್ಣ ವಾಸ್ತವಿಕ ಜೀವನ" ದಲ್ಲಿ ಅನುಭವಿಸಬೇಕು ಎನ್ನುವುದು ಸಹೃದಯ ಹೊಂದಿದ ನಾಗರೀಕ ಸಮಾಜದ ಸಂಭಾವಿತರಿಗೂ ಸಹ ಅಯ್ಯೊ ಎನ್ನಿಸದೆ ಇರದು ಆದರೆ ದೇವರಿಗೆ ಇದು ಎಷ್ಟು ಸರಿ ಎನ್ನಿಸುತ್ತೆ, ಕ್ಷಮೆ ಅನ್ನುವುದಕ್ಕೆ ಬೆಲೆ ಇಲ್ಲವೆ?  ಈ ಎಲ್ಲ ವಿಷಯಗಳು ನಮ್ಮನ್ನು  ಚಿಂತನೆಗೆ ಹಚ್ಚಿಸುವುದಕ್ಕೆ ಕಾರಣವಾಗುತ್ತವೆ.

ಒಂದು ಕುಟುಂಬ, ಒಂದು ಊರು, ಹಾಗೆಯೆ ಸಾವಿರಾರು ಕುಟುಂಬ ಮತ್ತು ಸಾವಿರಾರು ಊರು ವಲಸೆ ಹೋದರೆ "ಹಳ್ಳಿಗಳೇ ಈ ದೇಶದ ಬೆನ್ನೆಲುಬು" ಎನ್ನುವ ವಾಸ್ತವ ಪರಿಕಲ್ಪನೆಗೆ ಕೊಡಲಿಪೆಟ್ಟು ಬಿಳುವುದಿಲ್ಲವೆ. ಸ್ಥಿತಿವಂತರ ಮಕ್ಕಳು ಅದು ಹಳ್ಳಿ, ಪಟ್ಟಣ, ತಾಲೂಕು, ಜಿಲ್ಲೆ, ನಗರ, ಹೀಗೆ ಯಾವುದೇ ಪ್ರದೇಶದ ಮಕ್ಕಳು ಓದಿ ವಿದ್ಯಾವಂತರಾಗಿ ದೇಶ ವಿದೇಶಗಳಲ್ಲಿ ವಿವಿಧ ಹುದ್ದೆಗಳಲ್ಲಿ ಕೆಲಸ ಮಾಡುತಿದ್ದರೆ, ಬಡ ರೈತರ ಮಕ್ಕಳ ಗತಿ ಯೇನು? ತಿನ್ನುವುದಕ್ಕೆ ಅನ್ನವೆಲ್ಲಿಂದ ಬರಬೇಕು?

ಸ್ಪಂದಿಸುವ ಸಮಾಜ, ತ್ಯಾಗ ಮನೋಭಾವ, ಹಂಚಿಕೊಂಡು ತಿನ್ನುವ ಸಹೃದಯ ನಾವೆಲ್ಲಿಯವರೆವಿಗೂ ಕಲಿಯುವುದಿಲ್ಲವೋ ಅಲ್ಲಿಯವರೆಗೆ ಊರು ಇರಲಿ, ನಮ್ಮ ಅಕ್ಕ ಪಕ್ಕದ ಕುಟುಂಬಗಳು ಸಹ ಉದ್ದಾರ ವಾಗದೆ ಇರದು. ಈ ಸಣ್ಣ ಕಥೆ ನಮ್ಮಲ್ಲಿ ಹಲವಾರು ಯೋಚನೆಗಳನ್ನು ಹುಟ್ಟು ಹಾಕುತ್ತೆ, ನಾವು ಯೋಚಿಸುವ ದಿಕ್ಕನ್ನು, ನಮ್ಮ ನಂಬಿಕೆಯನ್ನು, ನಮ್ಮ ಸ್ವಾರ್ಥವನ್ನು ಹಾಗು ನಮ್ಮ ವೈಚಾರಿಕ ಸಿದ್ಧಾಂತ ವನ್ನು ಸಹ ಬದಲಾಯಿಸಬಹುದೇನೋ?


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

Click below headings