ಭಾನುವಾರ, ಆಗಸ್ಟ್ 23, 2020

ಆರೋಗ್ಯ ಅಥವಾ ಭಾಗ್ಯ

 


ಪ್ರಪಂಚ ಮತ್ತು ನಮ್ಮ ಆಧುನಿಕ ಜೀವನ ದಿನೇ ದಿನೇ ಬದಲಾಗುತ್ತಿರುವದನ್ನ ನಾವು ಕಾಣುತಿದ್ದೇವೆ

ಇವತ್ತಿನ ಪ್ರಸ್ತುತ ಪರಿಸ್ಥಿತಿಯಲ್ಲಿ ಆರೋಗ್ಯ ಮತ್ತು ಭಾಗ್ಯ ಎರಡು ಬೇಕಾಗಿವೆ. ನಾವು ತಿನ್ನುತ್ತಿರುವ ಬಹುತೇಕ ಆಹಾರ ಪದಾರ್ಥಗಳನ್ನು ರಾಸಾಯನಿಕಗಳನ್ನು ಉಪಯೋಗಿಸಿ ‌ಬೆಳೆಯುತಿದ್ದು, ಉತ್ತಮ ಗುಣಮಟ್ಟದ ಆಹಾರ ಪದಾರ್ಥಗಳು ಸಿಗುವುದು ಅಪರೂಪವಾಗಿದೆ. ಇಂತಹ ಆಹಾರ ಸೇವನೆಯಿಂದ ಮನುಷ್ಯನ ಜೀವಿತಾವಧಿ ಕಡಿಮೆಯಾಗಿದೆ ಎಂದೇ ಹೇಳಬಹುದು.

ಒಂದು ಕಾಲದ ಶ್ರೀಮಂತರ ಕಾಯಿಲೆ ಎಂದು ಹೆಸರಾಗಿದ್ದ ಬಿಪಿ ಮತ್ತು ಸಕ್ಕರೆ ಕಾಯಿಲೆಗಳು ಇಂದು ಬಡವ-ಬಲ್ಲಿದ, ನಗರಗಳು ಮತ್ತು ಹಳ್ಳಿಗಳು ಎನ್ನುವ ಭೇದವಿಲ್ಲದೆ ಪ್ರತಿಯೊಬ್ಬರ ನ್ನು ಕಾಡುತ್ತಿವೆ. ಅವೊಂದೇ ಅಲ್ಲ, ಹಲವಾರು ಮಾರಣಾಂತಿಕ ಕಾಯಿಲೆಗಳೂ ಸಹ ಇಂದು ಎಲ್ಲೆಡೆ ದಾಂಗುಡಿ ಇಟ್ಟಿವೆ.

ಇತ್ತೀಚೆಗೆ ನಾನು ಕಂಡಂತೆ ಹಲವಾರು ಜನರು ಅದರಲ್ಲೂ ನಲವತ್ತು ವರ್ಷಗಳ ಆಸುಪಾಸಿನ ಜನರು ಅಕಾಲಿಕ ಮೃತ್ಯುವೀಡಾಗಿದ್ದಾರೆ.

ಅಂದು ಅವಿಭಕ್ತ ಕುಟುಂಬದ ಒಂದೊಂದು ಮನೆಯಲ್ಲಿ ಎಂಟಂತ್ತು ಜನ ಒಟ್ಟೊಟ್ಟಿಗೆ ವಾಸಿಸುತಿದ್ದರು.
ಮನೆಯಲ್ಲಿ ಯಾರಾದರೂ ಕಾಯಿಲೆ ಬಿದ್ದರೆ ಒಬ್ಬರಲ್ಲ ಒಬ್ಬರು ಸೇವೆ ಮಾಡುತಿದ್ದರು.
ಕಾಲಕ್ರಮೇಣ ನ್ಯೂಕ್ಲಿಯರ್ ಫ್ಯಾಮಿಲಿ ಗಳಾಗಿ ಇಂದು ಒಂದು ಎರಡು ಮಕ್ಕಳಿಗೆ ನಿಯಂತ್ರಣ ಮಾಡಿಕೊಂಡು ಅದ್ಯಾವೂದೋ ಜಾಲಕ್ಕೆ ಬಲಿಯಾಗಿ ಆರೋಗ್ಯದ ಕಡೆ ಗಮನ ಕೊಡದೆ
ದುಡಿಮೆಯ ಹಿಂದೆ ಬಿದ್ದಿದ್ದೇವೆ.
ಜನರ ಮೈಯಲ್ಲಿ ಶಕ್ತಿ ಇರುವವರಿಗೆ ದುಡಿಯುತ್ತಾರೆ, ವಯಸ್ಸಾದ ಮೇಲೆ ಯಾರ ಮೇಲೆ ಅವಲಂಬಿತರಾಗದೆ ಜೀವನ ನಡೆಸಲು ಮತ್ತು ಕೊನೆಕಾಲದಲ್ಲಿ ಆರೋಗ್ಯ ಕೈ ಕೊಟ್ಟಾಗ ಕನಿಷ್ಟ ಪಕ್ಷ ಭಾಗ್ಯ (ಹಣ) ವಿದ್ದರೆ ಯಾರ ನೆರವಿಲ್ಲದೆ ಖರ್ಚುಗಳನ್ನ ನಿಭಾಯಿಸಿ ಕೊಳ್ಳಬಹುದು.
ಒಳ್ಳೆಯ ಆರೋಗ್ಯ ವಿಟ್ಟುಕೊಂಡು ಸಾಯುವವರೆಗೆ ದುಡಿದು ತಿನ್ನುತ್ತೇನೆ ಎನ್ನುವುದು ಇಂದಿನ ಕಾಲದಲ್ಲಿ ಬಾಲಿಶವೆನ್ನ ಬಹುದು. ಇಷ್ಟೊಂದು ವೃದ್ದಾಶ್ರಮಗಳು ಇಂದು ಸ್ಥಾಪನೆಯಾಗುತ್ತಿರಲಿಲ್ಲ.

ಪ್ರತಿದಿನವೂ ಹೇಳುವ ಮೃತ್ಯುಂಜಯ ಮಂತ್ರ
ಮೃತ್ಯುವನ್ನು ಜಯಿಸುವ ಕಾರಣಕ್ಕಾಗಿ ಅಲ್ಲ. ಮೃತ್ಯುವು ಸುಲಭವಾಗಿ, ರೋಗ ರುಜಿನಗಳಿಲ್ಲದೆ ಅನಾಯಾಸವಾಗಿ ಬರಲಿ ಎಂಬ ಅರ್ಥ. ಅದನ್ನೇ ಇಂದಿನ ಕಾಲದಲ್ಲಿ ಎಲ್ಲರೂ ಬಯಸುವುದು.

ಏನೇ ಇರಲಿ, ಆರೋಗ್ಯವೂ ಬೇಕು ಭಾಗ್ಯವೂ ಬೇಕು, ಯಾರ ಅರವಲಂಬನೆ ಇಲ್ಲದೆ ಬಾಳಿ ಬದುಕಿ ಮುಂದಿನ ಪೀಳಿಗೆಗೆ ನಮ್ಮ ಜೀವನದ ಮೌಲ್ಯಗಳನ್ನು ಬಿಟ್ಟು ಹೋಗಬೇಕಿದೆ.
--
Written by P.S.Ranganataha(ಪಿ.ಎಸ್.ರಂಗನಾಥ)
#p.s.ranganatha

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

Click below headings